ಕೇಂದ್ರ ಸರಕಾರದಿಂದ ಮನರೇಗಾ ನಿರ್ಲಕ್ಷ್ಯ : ಕಾಂಗ್ರೆಸ್
ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಯೋಜನೆ 20 ವರ್ಷ ಪೂರೈಸಿದರೂ ಬಜೆಟ್ ಹೆಚ್ಚಳವಾಗದೇ, ಐದು ತಿಂಗಳಲ್ಲಿ 60
Cong


ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಯೋಜನೆ 20 ವರ್ಷ ಪೂರೈಸಿದರೂ ಬಜೆಟ್ ಹೆಚ್ಚಳವಾಗದೇ, ಐದು ತಿಂಗಳಲ್ಲಿ 60% ಖರ್ಚಾಗಿರುವುದನ್ನು ಅವರು ಗಂಭೀರವೆಂದು ಹೇಳಿದ್ದಾರೆ.

ಕಳೆದ 11 ವರ್ಷಗಳಿಂದ ಸಮರ್ಪಕ ನಿಧಿ ನೀಡದೇ, ವೇತನ ಪಾವತಿಯಲ್ಲಿ ವಿಳಂಬ ಸಾಮಾನ್ಯವಾಗಿದೆ ಎಂದು ರಮೇಶ್ ದೂರಿದ್ದಾರೆ. ಎನ್ಎಂಎಂಎಸ್ ಹಾಗೂ ಎಬಿಪಿಎಸ್ ವ್ಯವಸ್ಥೆಯಿಂದ 2 ಕೋಟಿ ಕಾರ್ಮಿಕರಿಗೆ ಕೆಲಸ–ವೇತನ ಸಿಗದೇ ಹೋದ ಉದಾಹರಣೆ ನೀಡಿದ ಅವರು, ದಿನಗೂಲಿ ನೌಕರರ ಕನಿಷ್ಠ ವೇತನ 400 ರೂ. ಆಗಬೇಕೆಂದು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande