ವಾಷಿಂಗ್ಟನ್, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕತಾರ್ ನಾಯಕರೊಂದಿಗೆ ನಡೆದ ಮಾತುಕತೆಯಲ್ಲಿ ದೋಹಾದ ಮೇಲೆ ನಡೆದ ದಾಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಕತಾರ್ನ ಸಾರ್ವಭೌಮತ್ವ ಉಲ್ಲಂಘನೆಗೆ ಕ್ಷಮೆಯಾಚಿಸಿದ ನೆತನ್ಯಾಹು, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದು ಎಂದು ಭರವಸೆ ನೀಡಿದರು. ಗಾಜಾ ಯುದ್ಧ ಕೊನೆಗೊಳಿಸುವ ಪ್ರಸ್ತಾಪಗಳು ಹಾಗೂ ಪ್ರಾದೇಶಿಕ ಸುರಕ್ಷತೆ ಕುರಿತಂತೆ ಕತಾರ್, ಇಸ್ರೇಲ್ ಮತ್ತು ಅಮೆರಿಕಾ ನಾಯಕರು ಚರ್ಚೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa