ನೇಪಾಳ : 14 ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆಪಿ ಓಲಿ
ಕಠ್ಮಂಡು, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಧಿಕಾರದಿಂದ ಪದಚ್ಯುತಗೊಂಡು 14 ದಿನಗಳ ನಂತರ, ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ಭಕ್ತಪುರದಲ್ಲಿ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಓಲಿ, ಸಿಂಘಾ ದ
Kp oliy


ಕಠ್ಮಂಡು, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಧಿಕಾರದಿಂದ ಪದಚ್ಯುತಗೊಂಡು 14 ದಿನಗಳ ನಂತರ, ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ಭಕ್ತಪುರದಲ್ಲಿ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಓಲಿ, ಸಿಂಘಾ ದರ್ಬಾರ್ ಬೆಂಕಿ ಪ್ರಕರಣವನ್ನು ಒಳನುಸುಳುಕೋರರ ಪಿತೂರಿ ಎಂದು ಆರೋಪಿಸಿದರು. ತಮ್ಮ ದೇಶ ಮತ್ತು ಇತಿಹಾಸವನ್ನು ಪ್ರೀತಿಸುವವರು ಎಂದಿಗೂ ಸಿಂಘಾ ದರ್ಬಾರ್‌ಗೆ ಬೆಂಕಿ ಹಚ್ಚುವುದಿಲ್ಲ, ಎಂದು ಅವರು ಹೇಳಿದರು.

ಕಠ್ಮಂಡು ಮೇಯರ್ ಬಾಲೆನ್ ಶಾ ಅವರನ್ನು ಗುರಿಯಾಗಿಸಿ ಮಾತನಾಡಿದ ಓಲಿ, ಕೆಲವು ದಿನಗಳ ಹಿಂದೆ ದರ್ಬಾರ್‌ಗೆ ಬೆಂಕಿ ಹಚ್ಚುವ ಬೆದರಿಕೆ ಬಂದಿತ್ತು, ಅದರಲ್ಲೇ ಈ ದಾಳಿ ನಡೆದಿದೆ, ಎಂದರು.

ಪ್ರತಿಭಟನೆಗಳನ್ನು ಟೀಕಿಸಿದ ಅವರು, ನೇಪಾಳ ಈಗ ಕೆಟ್ಟ ಹೆಸರು ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ. ಅನೇಕ ರಾಷ್ಟ್ರಗಳು ವೀಸಾ ಮತ್ತು ಉದ್ಯೋಗ ನೀಡುವುದನ್ನು ನಿಲ್ಲಿಸಿವೆ. ಈ ಪರಿಸ್ಥಿತಿಯಿಂದ ದೇಶವನ್ನು ಉಳಿಸಬೇಕು, ಎಂದು ಒತ್ತಾಯಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande