ಕೋಲಾರ, ೧೪ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ಜಾತಿ ಗಣತಿಗೆ ಸರಕಾರ ಘೋಷಣೆ ಮಾಡಿದ್ದು, ಸಮೀಕ್ಷೆಯಲ್ಲಿ ವಹ್ನಿಕುಲ ಸಮುದಾಯದವರು ಸಂಖ್ಯೆ ೧೫೦೮ರಲ್ಲಿ ವಹ್ನಿಕುಲ/ ವಹ್ನಿಕುಲ ಕ್ಷತ್ರಿಯ ಎಂದೇ ನಮೂದಿಸಬೇಕು ಎಂದು ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಮನವಿ ಮಾಡಿದರು.
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲಾ ವಹ್ನಿಕುಲ ಕ್ಷತ್ರಿಯ ಸಂಘದಿ0ದ ಭಾನುವಾರ ನಡೆದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ೨೦೨೫ ರ ಸಾಮಾಜಿಕ ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ನಾವೂ ಸಹ ಅಲ್ಪಸಂಖ್ಯಾತರು, ಅದರಲ್ಲೂ ಬೇರೆ ಬೇರೆ ಜಾತಿಗಳೆಂದು ನಮೂದಿಸಿದರೆ ಜನಸಂಖ್ಯೆ ಕಡಿಮೆ ಲೆಕ್ಕವಾಗುತ್ತದೆ. ಉದಾಹರಣೆಗೆ ಒಕ್ಕಲಿಗರಲ್ಲೂ ೬೦ ಉಪಜಾತಿಗಳಿದ್ದರೂ ಒಕ್ಕಲಿಗ ಎಂದೇ ಬರೆಯಿಸುತ್ತಾರೆ. ಹಾಗೆಯೇ ಸಮೀಕ್ಷೆಗೆ ಬಂದಾಗ ಒಂದೇ ಜಾತಿ ಹೇಳಬೇಕು. ಇಲ್ಲವಾದರೆ ವಿಂಗಡಣೆ ಆಗುತ್ತದೆ ಎಂದರು.
ಇತ್ತೀಚೆಗೆ ಸ್ವಾಮೀಜಿಗಳು, ಹಿರಿಯರು ಸೇರಿ ಚರ್ಚಿಸಿ ವಹ್ನಿಕುಲ ಕ್ಷತ್ರಿಯ ಎಂದು ೧೫೦೮ರಲ್ಲಿ ವಹ್ನಿಕುಲ ಅಥವಾ ವಹ್ನಿಕುಲ ಕ್ಷತ್ರಿಯ ಎಂದು ಇದೆ ಅಲ್ಲೇ ನಮೂದಿಸಿ. ಉಪ ಜಾತಿಯಲ್ಲೂ ಹಾಗೆ ಮಾಡಿ, ಮನೆಮನೆಗೂ ಹೋಗಿ ವಿಚಾರ ತಿಳಿಸಿ. ಒಗ್ಗಟ್ಟಿಲ್ಲದ ಕಾರಣ ನಮಗೆ ರಾಜಕೀಯವಾಗಿಯೂ ಅನ್ಯಾಯವಾಗುತ್ತಿದೆ. ಒಗ್ಗಟ್ಟಾಗಿ ನಮೂದಿಸಿದರೆ ನಮಗೇ ಅನುಕೂಲವಾಗಲಿದ್ದು, ಜನಸಂಖ್ಯೆ ಹೆಚ್ಚಿದ್ದರೆ ಸರಕಾರವನ್ನು ಕತ್ತುಪಟ್ಟಿ ಹಿಡಿದು ಸೌಲಭ್ಯ ಕೇಳಬಹುದು. ಸೆ.೨೨ ರಿಂದ ಅ.೭ ರವರೆಗೆ ನಡೆಯಲಿರುವ ಸಮೀಕ್ಷೆಯಲ್ಲಿ ಇದೊಂದು ಕೆಲಸ ಮಾಡಿಕೊಟ್ಟರೆ ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ.
ವಹ್ನಿಕುಲ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಸುಬ್ಬಣ್ಣ ಮಾತನಾಡಿ, ಗೊಂದಲಗಳಿ0ದ ಒಬ್ಬೊಬ್ಬರು ಒಂದೊAದು ಜಾತಿ ನಮೂದಿಸಿದಲ್ಲಿ ನಮ್ಮ ಸಮುದಾಯ ಸೌಲಭ್ಯಗಳಿಂದ ವಂಚಿತವಾಗಲಿದ್ದು, ಅದನ್ನು ತಪ್ಪಿಸುವ ಸಲುವಾಗಿ ಎಲ್ಲರೂ ಒಂದೇ ಜಾತಿಯನ್ನು ನಮೂದಿಸಬೇಕು. ಆಗ ಮಾತ್ರವೇ ಸರಕಾರ, ನಮಗೆ ಜನಸಂಖ್ಯೆಯ ಸ್ಪಷ್ಟ ಚಿತ್ರಣ ಸಿಗಲಿದ್ದು, ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದರು.
ಮುಖ0ಡ ಹೂಡಿ ವಿಜಯ್ ಕುಮಾರ್ ಮಾತನಾಡಿ, ಕ್ರಮಸಂಖ್ಯೆ ೧೫೦೮ ಬರೆಯಿಸಬೇಕೆಂದು ರಾಜ್ಯ ಮುಖಂಡರು ತೀರ್ಮಾನಿಸಿದ್ದು, ಅದನ್ನು ಎಲ್ಲರೂ ಪಾಲಿಸಬೇಕು. ಈಗ ತಪ್ಪು ಮಾಡಿದರೆ ನಮ್ಮ ಮಕ್ಕಳು, ಮೊಮ್ಮಕ್ಕಳೂ ಕಷ್ಟ ಅನುಭವಿಸುತ್ತಾರೆ. ೨೧ ಉಪ ಜಾತಿಗಳು ನಮ್ಮಿಂದಲೇ ಆಗಿದ್ದು, ಒಬ್ಬೊಬ್ಬರು ಒಂದೊAದು ಬರೆಯಿಸಿರುವುದರಿಂದ ಗೊಂದಲ ಆಗಿದೆ. ಅಂತಹ ದೊಡ್ಡ ತಪ್ಪು ಆಗದಿರಲು ಪ್ರತಿ ತಾಲೂಕು, ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅರಿವು ಮೂಡಿಸಬೇಕಿದ್ದು, ಅದಕ್ಕಾಗಿ ಮನೆಮನೆಗೂ ಸ್ಟಿಕ್ಕರ್ ಅಂಟಿಸಲು ಸಂಘಕ್ಕೆ ೨ ಲಕ್ಷರೂ ನೀಡುವೆ, ಅಗತ್ಯವಿದ್ದರೆ ಇನ್ನಷ್ಟು ನೀಡುವೆ ಎಂದು ಘೋಷಿಸಿದರು.
೯-೧೦ನೇ ಕಾಲಂ ಬಹಳ ಮುಖ್ಯವಾದದ್ದು:
ಜಿಲ್ಲಾ ವಹ್ನಿಕುಲ ಕ್ಷತ್ರಿಯ ಸಂಘಸ ಜಿಲ್ಲಾಧ್ಯಕ್ಷ ಎಂ.ಉದಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಂಖ್ಯೆಯನ್ನು ಮಾತಿನಲ್ಲಿ ಹೇಳುವುದಕ್ಕಿಂತ ವಸ್ತುಸ್ಥಿತಿ ವರದಿಯಿದ್ದರೆ ಬಹಳಷ್ಟು ಅನುಕೂಲವಾಗಲಿದೆ. ಸಮೀಕ್ಷೆಯಲ್ಲಿ ೬೦ ಕಾಲಂಗಳಿವೆ, ಜಾತಿಯ ನಿಖರವಾದ ಸಂಖ್ಯೆಯನ್ನೇ ನಮೂದಿಸಬೇಕು. ಜಿಲ್ಲೆಯಲ್ಲಿ ಒಂದೊAದು ಭಾಗದಲ್ಲಿ ಒಂದೊAದು ಹೆಸರು ಇವೆ. ಸಮೀಕ್ಷೆಯಲ್ಲಿ ಬೇರೆ ಬೇರೆ ಹೆಸರು ಬರೆಯಿಸಿದರೆ ಜನ ಸಂಖ್ಯೆಯು ನಿಖರವಾಗಿ ಸಿಗುವುದಿಲ್ಲ. ಹೀಗಾಗಿ ನಾವೆಲ್ಲರೂ ಒಂದು ಹೆಸರನ್ನೇ ಬರೆಯಿಸಬೇಕು. ಆಗ ನಮಗೆ ಹಕ್ಕು, ಅನುಕೂಲ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಬಿಸಿಎA ಇಲಾಖೆಯಿಂದ ಶಿಕ್ಷಕರಿಗೆ ಕೈಪಿಡಿ ನೀಡಲಾಗಿದ್ದು ವಹ್ನಿಕುಲ ಕ್ಷತ್ರಿಯ ೧೫೦೮ ರಲ್ಲಿ ನಮ್ಮ ಜಾತಿಯಿದೆ. ಅದನ್ನು ನಿಖರವಾಗಿ ನಮೂದಿಸಬೇಕಿದ್ದು, ೬೦ ಪ್ರಶ್ನೆಗಳಿಗೂ ಮಾಹಿತಿಯನ್ನೂ ಸಹ ಗೊಂದಲಕ್ಕೆ ಒಳಗಾಗದೇ ಸ್ಪಷ್ಟವಾಗಿ ಒದಗಿಸಿ ಎಂದ ಅವರು, ೯ ಮತ್ತು ೧೦ ನೇ ಕಾಲಂನಲ್ಲಿ ಸರಿಯಾಗಿ ನಮೂದಿಸಿ. ಅದೇ ಬಹಳ ಮುಖ್ಯವಾದದ್ದು ಎಂದು ಎಚ್ಚರಿಸಿದರು.
ಸಭೆಯಲ್ಲಿ ವೇಮಗಲ್ ಕುರುಗಲ್ ಸದಸ್ಯರಾದ ಸುಜಾತಮ್ಮ ಮುನಿರಾಜು, ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ರಾಜ್ಯ ನಿರ್ದೇಶಕರಾದ ನಾಗಾರ್ಜುನ, ವಿನಯ್, ಮುಖಂಡರಾದ ಗೋಪಿ, ಬಡಿಗಿ ಶ್ರೀನಿವಾಸ್, ವಿನಯ್, ಚಿನ್ನಿ ವೆಂಕಟೇಶ್, ಕ್ಯಾಲನೂರು ಸುರೇಶ್, ನಾರಾಯಣಮೂರ್ತಿ, ಗಾಯತ್ರಿ, ವೇಮಗಲ್ ಶ್ರೀಧರ್ ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ಭಾನುವಾರ ವಹ್ನಿಕುಲ ಸಮುದಾಯದಿಂದ ಜಾತಿ ಗಣತಿ ಸಮೀಕ್ಷೆಯ ಬಗ್ಗೆ ಸಭೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್