ಕಾಟನ್ ಜಿಂನಿಂಗ್ ಘಟಕಗಳಿಗೆ ಮಂಜೂರಾದ ಹಣ ಶೀಘ್ರ ಬಿಡುಗಡೆಗೆ ಸಚಿವರ ಚರ್ಚೆ
ಬೆಂಗಳೂರು, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿರುವ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಘಟಕಗಳಿಗೆ ಮಂಜೂರಾಗಿರುವ ಸಹಾಯಧನವನ್ನು ಶೀಘ್ರ ಬಿಡುಗಡೆಗೊಳಿಸುವ ಕುರಿತು ಸಚಿವರಾದ ಎನ್ ಎಸ್ ಬೋಸರಾಜು ಅವರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ
*ಕಾಟನ್ ಜಿಂನಿಂಗ್ ಘಟಕಗಳಿಗೆ ಮಂಜೂರಾದ ಹಣ ಶೀಘ್ರ ಬಿಡುಗಡೆಗೆ ಸಚಿವರ   ಚರ್ಚೆ*


*ಕಾಟನ್ ಜಿಂನಿಂಗ್ ಘಟಕಗಳಿಗೆ ಮಂಜೂರಾದ ಹಣ ಶೀಘ್ರ ಬಿಡುಗಡೆಗೆ ಸಚಿವರ   ಚರ್ಚೆ*


ಬೆಂಗಳೂರು, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿರುವ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಘಟಕಗಳಿಗೆ ಮಂಜೂರಾಗಿರುವ ಸಹಾಯಧನವನ್ನು ಶೀಘ್ರ ಬಿಡುಗಡೆಗೊಳಿಸುವ ಕುರಿತು ಸಚಿವರಾದ ಎನ್ ಎಸ್ ಬೋಸರಾಜು ಅವರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಪುರ್ ಅವರನ್ನು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಸದಸ್ಯರೊಂದಿಗೆ ಭೇಟಿ ಮಾಡಿ ಚರ್ಚಿಸಿದರು.

ವಿಕಾಸ ಸೌಧದಲ್ಲಿರುವ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಕಾರ್ಯಾಲಯದಲ್ಲಿ ಸಭೆ ನಡೆಸಿದರು.

ರಾಯಚೂರು ಜಿಲ್ಲೆಯ ಒಟ್ಟು 11 ಕಾಟನ್ ಜಿನ್ನಿಂಗ್ ಅಂಡರ್ ಪ್ರಸಿಂಗ್ ಘಟಕಗಳಿಗೆ 2021- 22 ರಲ್ಲಿ ಸಹಾಯ ಧನವನ್ನು ಮಂಜೂರು ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಹಣ ಬಿಡುಗಡೆಯಾಗಿರುವುದಿಲ್ಲ 2020- 25ರ ಕೈಗಾರಿಕಾ ನೀತಿಯ ಅನುಸಾರ ಶೀಘ್ರ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ತಿಳಿಸಿದರು.

ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಘಟಕಗಳ ಎದುರಿಸುತ್ತರುವ ಸಮಸ್ಯೆಗಳ ಕುರಿತು ಕೈಗಾರಿಕೆ ಸಚಿವರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ರಾಯಚೂರು ಕಾಟನ್ ಮಿಲ್ಲರ್ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಿ ರೆಡ್ಡಿ, ಶೈಲೇಶ್ ಕುಮಾರ್, ಆನಂದ್ ರೆಡ್ಡಿ, ರಮೇಶ್ ಲಾಲ್, ಪ್ರತಾಪ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande