ಕಲಬುರಗಿ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಲು ಪ್ರಯತ್ನಿಸಿದ್ದರು ಎಂಬ ಆರೋಪವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ದೆಹಲಿಯಲ್ಲಿ ಗುಪ್ತ ಚರ್ಚೆ ನಡೆಸಿದ್ದರು.
ಕಾಂಗ್ರೆಸ್ನ 60–70 ಶಾಸಕರನ್ನು ಕರೆತರಲು ಡಿಕೆಶಿ ಮಾತುಕತೆ ನಡೆಸಿದ್ದರು. ಆದರೆ ಆಂತರಿಕ ವರದಿ ಪ್ರಕಾರ ಅವರ ಬಳಿ ಕೇವಲ 12 ಶಾಸಕರು ಮಾತ್ರ ಇದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ನಿರಾಕರಿಸಿತು ಎಂದು ಹೇಳಿದ್ದಾರೆ.
ವಿಜಯೇಂದ್ರ ಮತ್ತು ಶಿವಕುಮಾರ್ ಒಟ್ಟಿಗೆ ಕುಳಿತುಕೊಂಡಿದ್ದರೆ ಕರ್ನಾಟಕ ಮಾರಾಟವಾಗುತ್ತಿತ್ತು ಎಂದು ಯತ್ನಾಳ್ ಆರೋಪಿಸಿದರು.
ಡಿ.ಕೆ.ಶಿವಕುಮಾರ್ ನಮಸ್ತೆ ಸದಾ ವತ್ಸಲೇ ಹಾಡಿದರು ಆದರೆ ನಮಸ್ತೆ ಸೋನಿಯಾ ಮಾತೆ ಎಂದು ಹಾಡಿದ್ದರೆ 24 ಗಂಟೆಯಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂದು ವ್ಯಂಗ್ಯವಾಡಿದರು.
ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದನ್ನು ಟೀಕಿಸಿದ ಯತ್ನಾಳ ಸನಾತನ ಧರ್ಮದ ನಂಬಿಕೆ ಇಟ್ಟಿರುವ ಸಾಧನೆ ಮಾಡಿದ ದಲಿತ ಅಥವಾ ಇತರೆ ಮಹಿಳೆಯನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಯತ್ನಾಳ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa