ಡಿ.ಕೆ. ಶಿವಕುಮಾರ್ ಅವರಿಂದ ಎರಡು ದೋಣಿ ಮೇಲೆ ಕಾಲಿಡುವ ಪ್ರಯತ್ನ : ಜೋಶಿ
ಹುಬ್ಬಳ್ಳಿ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ಧರ್ಮಸ್ಥಳ ವಿಚಾರದಲ್ಲಿ ಉಪ‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದ
ಡಿ.ಕೆ. ಶಿವಕುಮಾರ್ ಅವರಿಂದ ಎರಡು ದೋಣಿ ಮೇಲೆ ಕಾಲಿಡುವ ಪ್ರಯತ್ನ : ಜೋಶಿ


ಹುಬ್ಬಳ್ಳಿ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ಧರ್ಮಸ್ಥಳ ವಿಚಾರದಲ್ಲಿ ಉಪ‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜೋಶಿ, ಧರ್ಮಸ್ಥಳ ಏನು ಬಿಜೆಪಿಯವರ ಮನೆಯ ಸ್ವತ್ತಲ್ಲ ಎಂಬ ಶಿವಕುಮಾರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಒಂದೆಡೆ ಎಸ್ಐಟಿ ರಚನೆಯಲ್ಲಿ ಪ್ರಮುಖ ಭಾಗವಾಗಿದ್ದರೆ, ಈಗ 'ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ' ಎನ್ನುತ್ತಿದ್ದಾರೆ. ಹೀಗೆ ಎರೆಡು ದೋಣಿ ಮೇಲೆ ಕಾಲಿಟ್ಟು ಸಾಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಧರ್ಮಸ್ಥಳ ಬಿಜೆಪಿ ಸ್ವತ್ತೆಂದು ನಾವೆಲ್ಲಿ ಹೇಳಿದ್ದೇವೆ, ಸರ್ಕಾರ ಹಿಂದೂಗಳ ಗುಡಿ-ಗುಂಡಾರ ಒಡೆಯುವ ಕೆಲಸ ಮಾಡಿದರೆ ಸುಮ್ಮನಿರಬೇಕಾ ಎಂದು ಜೋಶಿ ಪ್ರಶ್ನಿಸಿದರು.

ಸಮಸ್ತ ಹಿಂದೂ ಸಮಾಜದ ಸ್ವತ್ತಿನೊಳಗೆ ಕೈ ಹಾಕುವ ಕೆಲಸವನ್ನು ನೀವು ಮಾಡುತ್ತಿದ್ದೀರಿ. ನಮ್ಮ ದೇಶದ ಗುಡಿ ಗುಂಡಾರಗಳ ದುಡ್ಡನ್ನು ಹೊಡೆಯುವ ಪ್ರಯತ್ನ ಮಾಡಿದಿರಿ. ಬಾಹುಬಲಿ ಬೆಟ್ಟ ಅಗೆದಿರಿ ನಾಚಿಕೆ ಆಗುವುದಿಲ್ಲವೇ? ಎಂದು ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.

ಸೌಜನ್ಯ ಕೊಲೆ ಪ್ರಕರಣದ ನಂತರ ತನಿಖೆ ಮಾಡುತ್ತೇವೆ ಎಂದಿದ್ಧೀರಿ. ಹಾಗಾಗಿ ನಾವು ಅತ್ಯಂತ ಶಾಂತ ರೀತಿಯಲ್ಲೇ ಇದ್ದೆವು. ಆದರೆ ಈಗ 'ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ' ಎಂಬ ಹೇಳಿಕೆ ಕೊಟ್ಟವರು ತಾವೇ ಅಲ್ಲವೇ? ತಾವ್ಯಾರ ಬಗ್ಗೆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಧರ್ಮಸ್ಥಳ ಪ್ರಕರಣದಲ್ಲಿ ಪ್ರಹಸನ ತೀರಾ ಅತಿರೇಖಕ್ಕೆ ಹೋಗುತ್ತಿದೆ. ಹೇಳೋರು-ಕೇಳೋರು ಯಾರೂ ಇಲ್ಲ ಎನ್ನುವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದೆ ಈ ಸರ್ಕಾರ. ಹಾಗಾಗಿ ಬಿಜೆಪಿ ಧರ್ಮದ ಪರ, ಒಂದು ಪವಿತ್ರ ಕ್ಷೇತ್ರದ ಪರ ನಿಂತು ಪ್ರತಿಕ್ರಿಯಿಸುತ್ತಿದೆ ಎಂದು ಸಚಿವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande