ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ : ಯತ್ನಾಳ
ವಿಜಯಪುರ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಇದೊಂದು ಅಂತಾರಾಷ್ಟ್ರೀಯ ಹುನ್ನಾರ ಆಗಿದೆ. ಪಾಕಿಸ್ತಾನದ ISI, ಎಡಪಂಥೀಯರು, ನಕ್ಸಲರ ಕೈವಾಡ ಇದೆ. ಅನಾಮಿಕ ಹೇ
ಯತ್ನಾಳ


ವಿಜಯಪುರ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಇದೊಂದು ಅಂತಾರಾಷ್ಟ್ರೀಯ ಹುನ್ನಾರ ಆಗಿದೆ. ಪಾಕಿಸ್ತಾನದ ISI, ಎಡಪಂಥೀಯರು, ನಕ್ಸಲರ ಕೈವಾಡ ಇದೆ. ಅನಾಮಿಕ ಹೇಳಿದಂತೆ ಪೊಲೀಸರು ಕೇಳಿದ್ದು ಸಾಕು. ಈ ಪ್ರಕರಣ ಕೈಬಿಡಿ ಎಂದು ಸರ್ಕಾರಕ್ಕೆ ಶಾಸಕ ಯತ್ನಾಳ್ ಆಗ್ರಹಿಸಿದರು.

ಅಲ್ಲದೇ, ಅಧಿವೇಶನದಲ್ಲು ಈ ಬಗ್ಗೆ ಮಾತನಾಡಿದ್ದೇನೆ. ಗೃಹ ಸಚಿವರಿಗೂ ಹೇಳಿದ್ದೇನೆ. ಧರ್ಮಸ್ಥಳದ ಹೆಸರು ಕೆಡಿಸಲು ವ್ಯವಸ್ಥಿತ ಪಿತೂರಿ ಇದೆ. ಅನಾಮಿಕ, ಯೂಟ್ಯುಬರ್ ಸಮೀರ್ ಎಂ ಡಿ, ತಿಮ್ಮರೊಡಿ ಬ್ರೇನ್ ಮ್ಯಾಪಿಂಗ್ ಮಾಡಿಸಬೇಕು. ಅದಕ್ಕಾಗಿ ಈ ಪ್ರಕರಣ NIA ಗೆ ವಹಿಸಬೇಕು. ನೆಲದಲ್ಲಿ ಗುಂಡಿ ಅಗಿಯೋದು ಬಂದ್ ಮಾಡಬೇಕು. ಪೊಲೀಸರಿಗೆ ರೆಸ್ಟ್ ಸಿಗಲಿ. ಸರ್ಕಾರ SIT ರಚನೆ ಮಾಡಿದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ. ಪೊಲೀಸರ ಕಾರ್ಯವನ್ನು ಯತ್ನಾಳ ಶ್ಲಾಘಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande