ಹೊಸಪೇಟೆ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹೊಸಪೇಟೆ ಗ್ರಾಮೀಣ ಉಪವಿಭಾಗದ ಕಚೇರಿಯಲ್ಲಿ ಜೆಸ್ಕಾಂ ಗ್ರಾಹಕರ ಸಂವಾದ ಸಭೆಯನ್ನು ಆ.16 ರಂದು ಮದ್ಯಾಹ್ನ 3 ಗಂಟೆಗೆ ಏರ್ಪಡಿಸಲಾಗಿದೆ. ಹೊಸಪೇಟೆ ತಾಲೂಕಿನ ವಿದ್ಯುತ್ ಗ್ರಾಹಕರು(ಹೊಸಪೇಟೆ ನಗರ ಹೊರತುಪಡಿಸಿ) ಸಭೆಗೆ ಭಾಗವಹಿಸಿ, ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಅಹವಾಲುಗಳು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಕಾರ್ಯ ಮತ್ತು ಪಾಲನಾ ಗ್ರಾಮಿಣ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್