ಸಿಆರ್‌ಪಿಎಫ್ ಸ್ಥಾಪನಾ ದಿನ ; ಮಲ್ಲಿಕಾರ್ಜುನ ಖರ್ಗೆ ಶುಭಾಶಯ
ಬೆಂಗಳೂರು, 27 ಜುಲೈ (ಹಿ.ಸ.) : ಆ್ಯಂಕರ್ : 87ನೇ ಸ್ಥಾಪನಾ ದಿನದ ಅಂಗವಾಗಿ, ಕೇಂದ್ರ ಮೀಸಲು ಪೊಲೀಸ್ ಪಡೆಯ ಧೈರ್ಯಶಾಲಿ ಯೋಧರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಧೀರ, ಅದ್ಭುತ, ಚೈತನ್ಯಶೀಲ ಹಾಗೂ ಸ್ಥಿತಿಸ್
Kharge


ಬೆಂಗಳೂರು, 27 ಜುಲೈ (ಹಿ.ಸ.) :

ಆ್ಯಂಕರ್ : 87ನೇ ಸ್ಥಾಪನಾ ದಿನದ ಅಂಗವಾಗಿ, ಕೇಂದ್ರ ಮೀಸಲು ಪೊಲೀಸ್ ಪಡೆಯ ಧೈರ್ಯಶಾಲಿ ಯೋಧರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಧೀರ, ಅದ್ಭುತ, ಚೈತನ್ಯಶೀಲ ಹಾಗೂ ಸ್ಥಿತಿಸ್ಥಾಪಕ ಶಕ್ತಿಯಾಗಿ ಸಿಆರ್‌ಪಿಎಫ್ ದೇಶದ ಭದ್ರತೆಗೆ ಅತೀ ಮಹತ್ವಪೂರ್ಣ ಪಾತ್ರ ವಹಿಸುತ್ತಿದೆ, ಎಂದು ಅವರು ಪ್ರಶಂಸಿಸಿದ್ದಾರೆ.

ವೀರ ಯೋಧರ ತ್ಯಾಗಗಳನ್ನು ನಾವು ಶ್ರದ್ಧಾಪೂರ್ವಕವಾಗಿ ಸ್ಮರಿಸುತ್ತೇವೆ. ಅವರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪ ಹಾಗೂ ಆಳವಾದ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಎಂದು ಖರ್ಗೆ ಹೇಳಿದ್ದಾರೆ.

ಪ್ರತಿಯೊಬ್ಬ ಸಿಆರ್‌ಪಿಎಫ್ ಯೋಧನ ಧೈರ್ಯ, ಬದ್ಧತೆ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ದೇಶದ ಸೇವೆಯಲ್ಲಿ ನೀಡುತ್ತಿರುವ ನಿಮ್ಮ ಅಮೂಲ್ಯ ಕೊಡುಗೆಗೆ ನಮನ ಸಲ್ಲಿಸುವುದಾಗಿ ಖರ್ಗೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande