ಧರ್ಮಸ್ಥಳ : ಎಸ್‌ಐಟಿಯಿಂದ ಮುಂದುವರೆದ ದೂರುದಾರನ ವಿಚಾರಣೆ
ಮಂಗಳೂರು, 27 ಜುಲೈ (ಹಿ.ಸ.) : ಆ್ಯಂಕರ್ : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ದೂರುದಾರನ ವಿಚಾರಣೆ ಮುಂದುವರೆದಿದೆ. ಇಂದು ಖುದ್ದು ಎಸ್‌ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ, ಡಿಐಜಿ ಅನುಚೇತ್ ಹಾಗೂ ಎಸ್ಪಿ ಜಿತೇಂದ್ರ ದಯಾಮ ನೇ
ಧರ್ಮಸ್ಥಳ : ಎಸ್‌ಐಟಿಯಿಂದ ಮುಂದುವರೆದ ದೂರುದಾರನ ವಿಚಾರಣೆ


ಮಂಗಳೂರು, 27 ಜುಲೈ (ಹಿ.ಸ.) :

ಆ್ಯಂಕರ್ : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ

ದೂರುದಾರನ ವಿಚಾರಣೆ ಮುಂದುವರೆದಿದೆ.

ಇಂದು ಖುದ್ದು ಎಸ್‌ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ, ಡಿಐಜಿ ಅನುಚೇತ್ ಹಾಗೂ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ವಿಚಾರಣೆ ನಡೆದಿದೆ.

ಶನಿವಾರ ಅನಾಮಧೇಯ ವ್ಯಕ್ತಿ ನೀಡಿದ ಮಾಹಿತಿಯ ಆಧಾರದ ಮೇಲೆ ತನಿಖೆ ಆರಂಭಿಸಿದ ಎಸ್‌ಐಟಿ, ಅದರಂತೆ ದೂರುದಾರನನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು.

ಡಿಜಿಪಿ ಮೊಹಾಂತಿ ಅವರು ಈಗಾಗಲೇ ಶನಿವಾರದ ವಿಚಾರಣೆಯ ವಿವರ, ದೂರುದಾರನ ಹೇಳಿಕೆ, ಎಫ್‌ಐಆರ್ ಸೇರಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದು, ತನಿಖೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande