ನವದೆಹಲಿ, 21 ಜುಲೈ (ಹಿ.ಸ.) :
ಆ್ಯಂಕರ್ : ಅಹಮದಾಬಾದ್ ವಿಮಾನ ಅಪಘಾತದ ತನಿಖೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು, ವಿಮಾನ ಅಪಘಾತ ತನಿಖಾ ಬ್ಯೂರೋ ಒಂದು ನಿಷ್ಪಕ್ಷಪಾತ ಸಂಸ್ಥೆ ಎಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು. ತನಿಖೆಯ ಎಲ್ಲಾ ಪ್ರಕ್ರಿಯೆಗಳು ನಿಯಮಬದ್ಧವಾಗಿ ನಡೆಯುತ್ತಿವೆ ಎಂದು ಅವರು ಹೇಳಿದರು.
ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆಯ ಡೇಟಾ ಯಶಸ್ವಿಯಾಗಿ ಡಿಕೋಡ್ ಮಾಡಲಾಗಿದೆ. ಈ ಬಾರಿ ಮೊದಲ ಬಾರಿಗೆ ಭಾರತದಲ್ಲೇ ಡಿಕೋಡಿಂಗ್ ಕಾರ್ಯ ನಡೆದಿದೆ. ಅಂತಾರಾಷ್ಟ್ರೀಯ ಪ್ರೋಟೋಕಾಲ್ಗಳನ್ನು ಪಾಲನೆ ಮಾಡುತ್ತಾ, ಹಾನಿಗೊಂಡ ಪೆಟ್ಟಿಗೆಯ ಡೇಟಾವನ್ನು ದೇಶೀಯವಾಗಿ ವಿಶ್ಲೇಷಿಸಲು ಭಾರತ ಒತ್ತಾಯಿಸಿತ್ತು.
ತನಿಖೆಯ ಮೊದಲ ಹಂತ ಪೂರ್ಣಗೊಂಡಿದ್ದು ಪ್ರಾಥಮಿಕ ವರದಿ ಬಂದಿದೆ, ಅಂತಿಮ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಅಪಘಾತದ ಬಲಿಪಶುಗಳ ಕುರಿತು ಪರಿಹಾರದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa