ಕಲಬುರಗಿ, 09 ಜೂನ್ (ಹಿ.ಸ.) :
ಆ್ಯಂಕರ್ : ಕಲಬುರಗಿ ಜಿಲ್ಲೆಯ ಚಿತ್ತಾಪುರ
ತಾಲೂಕಿಮ ಲಾಡ್ಲಾಪುರ ಗುಡ್ಡಗಾಡು ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ಮೃತದೇಹ ಪ್ರಕರಣ ಬೇಧಿಸುವಲ್ಲಿ ಕಲಬುರಗಿ ಜಿಲ್ಲಾ ಪೋಲಿಸರು ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಗಣಿಯಾರ ತಾಂಡಾ ಮೂಲದ ದೇವಿಬಾಯಿ ಕೊಲೆಯಾದ ಮಹಿಳೆಯಾಗಿದ್ದು, ಪ್ರಕಟಣೆ ಸಂಭಂದಿಸಿದಂತೆ ಅದೇ ಗ್ರಾಮದ ಸೋಮ್ಲಾ ಹಾಗೂ ಪಪ್ಪು ರಾಠೋಡ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸೋಮ್ಲಾ ಹಾಗೂ ದೇವಿಬಾಯಿ ಲಿವಿಂಗ್ ಟೂಗೆದರ್ ರಿಲೆಷನ್ ಶಿಪ್ ನಲ್ಲಿದ್ರು ಮಗಳ ಮದುವೆ ವಿಚಾರಕ್ಕೆ ಉಂಟಾದ ಗಲಾಟೆ ಕೊನೆಯಲ್ಲಿ ಅಂತ್ಯವಾಗಿದೆ. ಮಹಿಳೆಯನ್ನ ಕೊಂದ ದುಷ್ಕರ್ಮಿಗಳು ಮೃತದೇಹವನ್ನು ಹೊಂಡೈ ವೆನ್ಯೂ ಕಾರ್ ನಲ್ಲಿ ಲಾಡ್ಲಾಪುರದ ಗುಡ್ಡದ ಬಳಿಯ ನಿರ್ಜನ ಪ್ರದೇಶದಲ್ಲಿ ಪೇಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ ಎಂದು ಎಸ್ ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಇನ್ನು ಬಂಧಿತರಿಂದ ಒಂದು ಕಾರ್ ಹಾಗೂ ಕೃತ್ಯಕ್ಕೆ ಬಳಿಸಿದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Samarth biral