ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ : ಬಿ ಎಸ್ ಹಿರೇಮಠ
ಗದಗ, 09 ಜೂನ್ (ಹಿ.ಸ.) : ಆ್ಯಂಕರ್ : ಗದಗ ನಗರದ ಶ್ರೀಮತಿ ಮನೋರಮಾಬಾಯಿ ಮೋಹನ್ ಕುಡತರಕರ್ ಫೌಂಡೇಶನ್ ಮನೋರಮಾ ಸ್ವತಂತ್ರ ಪದವಿ ಪೂರ್ವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಾಚಾರ್ಯರಾದ ಬಿ ಎಸ್ ಹಿರೇಮಠ ರವರು ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟ
ಪೋಟೋ


ಗದಗ, 09 ಜೂನ್ (ಹಿ.ಸ.) :

ಆ್ಯಂಕರ್ : ಗದಗ ನಗರದ ಶ್ರೀಮತಿ ಮನೋರಮಾಬಾಯಿ ಮೋಹನ್ ಕುಡತರಕರ್ ಫೌಂಡೇಶನ್ ಮನೋರಮಾ ಸ್ವತಂತ್ರ ಪದವಿ ಪೂರ್ವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ರಾಚಾರ್ಯರಾದ ಬಿ ಎಸ್ ಹಿರೇಮಠ ರವರು ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಅಭ್ಯಾಸಕ್ಕೆ ಪೂರಕವಾದ ವಾತವರಣ ಮಹಾವಿದ್ಯಾಲಯದಲ್ಲಿದೆ. ಉತ್ತಮವಾದ ಲೈಬ್ರರಿ ಹಾಗೂ ವರ್ಗ ಕೋಣೆಗಳು ಗಾಳಿ ಬೆಳಕಿನಿಂದ ಕೂಡಿದ್ದು ತಾವುಗಳು ಶಿಸ್ತು ಸಂಯಮದಿಂದ ವರ್ತಿಸಿ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಾಗಿರಿ ಎಂದು ಶುಭ ಹಾರೈಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುಷ್ಪಗಳನ್ನು ನೀಡುವುದರದೊಂದಿಗೆ

ಸ್ವಾಗತಿಸಿದರು.

ಸಂಸ್ಥೆಯ ಆಡಳಿತಾಧಿಕಾರಿಗಳಾದ ಕೀಶೋರ ಮುದಗಲ್ಲರವರು ಮಾತನಾಡಿ ವಿದ್ಯಾರ್ಥಿಗಳು ಯಾವುದೆ ಸಂಕೋಚ ಪಡದೆ ನಿರ್ಭಯದಿಂದ ಅಧ್ಯಯನ ಮಾಡಿ ತಂದೆ-ತಾಯಿ ಪ್ರೀತಿಗೆ ಪಾತ್ರರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿರಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನರಾದ ಎನ್ ಎಮ್ ಕುಡತರಕರ ವಹಿಸಿದ್ದರು. ಈ ವೇಳೆ ಹಲವರು ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande