ಛತ್ತಿಸಗಢ : ನಕ್ಸಲರ ಐಇಡಿ ಸ್ಫೋಟದಿಂದ ಪೋಲಿಸ್ ಅಧಿಕಾರಿ ಸಾವು
ಸುಕ್ಮಾ, 09 ಜೂನ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೊಂಟಾ ಪ್ರದೇಶದ ದೋಂದ್ರಾದಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಎಎಸ್‌ಪಿ ಆಕಾಶ್ ರಾವ್ ಗಿರ್ ಪುಂಜೆ ಹುತಾತ್ಮರಾಗಿದ್ದಾರೆ. ಗಸ್ತು ವೇಳೆ ಐಇಡಿ ಸ್ಫೋಟದಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತ
Naxal


ಸುಕ್ಮಾ, 09 ಜೂನ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೊಂಟಾ ಪ್ರದೇಶದ ದೋಂದ್ರಾದಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಎಎಸ್‌ಪಿ ಆಕಾಶ್ ರಾವ್ ಗಿರ್ ಪುಂಜೆ ಹುತಾತ್ಮರಾಗಿದ್ದಾರೆ.

ಗಸ್ತು ವೇಳೆ ಐಇಡಿ ಸ್ಫೋಟದಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸ್ಫೋಟದಲ್ಲಿ ಕೊಂಟಾ ಠಾಣೆಯ ಉಸ್ತುವಾರಿ ಸೋನಾಲ್ ಹಾಗೂ ಎಸ್‌ಡಿಪಿಒ ಸೇರಿದಂತೆ ಕೆಲ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಸುಕ್ಮಾ ಹಾಗೂ ಬಸ್ತಾರ್ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಜೂನ್ 10ರಂದು ಮಾವೋವಾದಿಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande