ಬೆಂಗಳೂರು, 08 ಜೂನ್ (ಹಿ.ಸ.) :
ಆ್ಯಂಕರ್ : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್ಐಎ ಗೆ ವಹಿಸಿದ ಕೇಂದ್ರ ಸರ್ಕಾರದ ನಿರ್ಧಾರ ಅಭಿನಂದನೀಯ ಎಂದು ಸಂಸದ ಕೊಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣವನ್ನು ಕೂಡಲೇ ಎನ್ಐಎ ಗೆ ನೀಡಿದ್ದರ ಪರಿಣಾಮವಾಗಿ ಎಲ್ಲಾ ಆರೋಪಿಗಳು ಹಾಗೂ ಆರೋಪಿಗಳಿಗೆ ಸಹಕರಿಸಿದ ಎಲ್ಲರನ್ನೂ ಎನ್ಐಎ ಬಂಧಿಸಿ ಇದರಲ್ಲಿ ಪಿಎಫ್ಐ ಉಗ್ರರು ಭಾಗಿಯಾಗಿದ್ದನ್ನು ಸ್ಪಷ್ಟಪಡಿಸಿತ್ತು ಮಾತ್ರವಲ್ಲದೆ ಕೂಡಲೇ ಆ ಸಂಘಟನೆಯನ್ನು ರಾಷ್ಟ್ರದಾದ್ಯಂತ ನಿಷೇಧಿಸಿತು. ಇದೀಗ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್ಐಎ ಗೆ ನೀಡಿದ್ದು ಈಗಾಗಲೇ ಕಾಂಗ್ರೆಸ್ ಸರ್ಕಾರದ ಕೃಪಾ ಕಟಾಕ್ಷದಿಂದ ನಾಟಕ ಮಾಡುತ್ತಿರುವ ಹಂತಕರನ್ನು ಎಳೆದು ತರುವಲ್ಲಿ ಯಶಸ್ವಿಯಾಗಲಿದೆ.
ಹಿಂದೂ ಕಾರ್ಯಕರ್ತರು ಬೇಡಿಕೆಗೆ ಕೂಡಲೇ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa