ಕೂಡ್ಲಿಗಿ, 08 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಕೂಡ್ಲಿಗಿ ತಾಲೂಕಿನ ಹುಣಸೆ ಹಣ್ಣನ್ನು ಬೇರ್ಪಡಿಸುವುದು ಕೂಡ್ಲಿಗಿ ತಾಲೂಕಿನಾದ್ಯಂತ ಸಹಜ ವೃತ್ತಿ ಮತ್ತು ಪ್ರವೃತ್ತಿ. ಗುಡೇಕೋಟೆಯ ಕಸಾಪುರ ಗ್ರಾಮದಲ್ಲಿ ಹುಣಸೆ ಹಣ್ಣಿನ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲು ನಬಾರ್ಡ್ 3.50 ಕೋಟಿ ರೂಪಾಯಿ ಮೊತ್ತದ ಅನುದಾನವನ್ನು ರೈತರಿಗೆ ನೀಡಿದೆ.
ಕೂಡ್ಲಿಗಿ ತಾಲೂಕಿನಲ್ಲಿ ಹುಣಸೆ ಮರಗಳ ತೋಪುಗಳು ಯಥೇಚ್ಛವಾಗಿವೆ. ಬರದ ನಾಡಲ್ಲಿ ಮಳೆಯಾಧಾರಿತ ಕೃಷಿಯೇ ಕೃಷಿಕರ ಆಧಾರ. ನೈಸರ್ಗಿಕವಾಗಿ ದಶಕಗಳಿಂದ ಬೆಳೆದುನಿಂತಿರುವ ಹುಣಸೆ ಗಿಡಗಳು ಇಲ್ಲಿಯ ಆದಾಯದ ಮೂಲ.
ಕೂಡ್ಲಿಗಿ ತಾಲೂಕನ್ನು ಒಂದರ್ಥದಲ್ಲಿ `ಹುಣಸೆ ನಾಡು' ಎಂದೇ ಕರೆಯಲಾಗುತ್ತದೆ. ಕೂಡ್ಲಿಗಿಯ ಹುಣಸೆಕಾಯಿ ಹುಳಿ ಹೆಚ್ಚು. ಗಾತ್ರದಲ್ಲಿ ವಿಶೇಷ. ಮರದಲ್ಲಿರುವ ಹುಣಸೆ ಕಾಯಿಗಳನ್ನು ಹೊಡೆದು, ನೆಲಕ್ಕುರುಳಿಸಿ, ಆರಿಸ ನಂತರ ಹುಣಸೆ ಕಾಯಿಗಳನ್ನು ಸಂಸ್ಕರಿಸುವುದು ಅನೇಕ ಕುಟುಂಬಗಳ ಸೀಸನಲ್ ವೃತ್ತಿ - ಪ್ರವೃತ್ತಿ.
ಆದೆ, ಹುಸನೇಕಾಯಿಗಳ ಸಂಸ್ಕರಣೆಯ ಅಗತ್ಯವನ್ನು ಅರ್ಥಮಾಡಿಕೊಂಡಿರುವ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಅವರು
ನಬಾರ್ಡ್ನಿಂದ 3.5 ಕೋಟಿ ರೂ. ಅನುದಾನ ತಂದು, ಹುಣಸೆಕಾಯಿ ಜೊತೆ ಶೇಂಗಾ ಸಂಸ್ಕರಣ ಘಟಕಕ್ಕೂ ಚಾಲನೆ ನೀಡಿ ಅನೇಕರ ಗಮನ ಸೆಳೆದಿದ್ದಾರೆ.
ಗುಡೇಕೋಟೆ ಹೋಬಳಿಯ ಕಸಾಪುರ ಗ್ರಾಮದ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕದಲ್ಲಿ ಹುಣಸೆ ಮತ್ತು ಶೇಂಗಾವನ್ನು ಸಂಸ್ಕರಿಸಿ, ಒಣಗಿಸಲಾಗುತ್ತದೆ. ಹುಣಸೆ ಪೇಸ್ಟ್ ಮಾಡುವುದು, ಹುಣಸೆ ಬೀಜದ ಪುಡಿ ಮಾಡುವುದು, ಇತ್ಯಾದಿಗಳನ್ನು ನಿರ್ವಹಿಸಲಾಗುತ್ತದೆ. ಶೇಂಗಾ ಚಿಕ್ಕಿ, ಇನ್ನಿತರೆಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿಯ ಪ್ರತಿ ಉತ್ಪನ್ನಕ್ಕೂ ಜಿಐ ಟ್ಯಾಗ್ ನೋಂದಣಿ ಮಾಡಲಾಗುತ್ತದೆ.
ಶಾಸಕ ಡಾ. ಎನ್.ಟಿ. ಶ್ರೀನಿವಾಸ ಅವರು, ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕ ಸ್ಥಾಪನೆಗೆ ನಬಾರ್ಡ್ ಹಣ ಬಿಡುಗಡೆ ಮಾಡಿದ್ದು, ಗುಡೇಕೋಟೆಯ ಕಸಾಪುರ ಗ್ರಾಮದಲ್ಲಿ ಅಧಿಕೃತ ಭೂಮಿ ಪೂಜೆ ಶೀರ್ಘದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಶಿಕ್ಷಕ ವೀರೇಶ ಕಣೇಕಲ್ಮಠ ಅವರು, ಕೂಡ್ಲಿ ತಾಲೂಕಿನಾದ್ಯಂತ ಇರುವ ಹುಣಸೆಕಾಯಿಗೆ ಅಂತಾರಾಷ್ಟ್ರೀಯ ಮನ್ನಣೆ ತರಲು ವೈಜ್ಞಾನಿಕ ಸಂಸ್ಕರಣೆ ಅಗತ್ಯ. ಈ ನಿಟ್ಟಿನಲ್ಲಿ ನಬಾರ್ಡ್ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕ್ಕೆ ಅನುದಾನ ನೀಡಿರುವುದು ಸಕಾಲಿಕ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್