ಗದಗ, 08 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜೂ.9 ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ)ಯಿಂದ ಬಹುಜನರ ವಿಮೋಚಕ ಪ್ರೊ.ಬಿ.ಕೃಷ್ಣಪ್ಪನವರ 88ನೇ ಜನ್ಮದಿನದ ನೆನಪಿನಲ್ಲಿ ನಾಗರಿಕ ಹಕ್ಕು ರಕ್ಷಣಾ ದಿನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಪ್ರಧಾನ ಸಂಚಾಲಕ ಬಾಲರಾಜ ಅರಬರ ಹೇಳಿದರು.
ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ವೈಚಾರಿಕ ಚಿಂತನೆ ಹಾಗೂ ಪ್ರಗತಿಪರ ಹೋರಾಟಗಳಲ್ಲಿ ನಿರತರಾದರು. ಬಿ. ಕೃಷ್ಣಪ್ಪನವರು ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಡಾ. ಬಾಬಾಸಾಹೇಬ ಅಂಬೇಡ್ಕರವರ ಕ್ರಾಂತಿಯ ಹಾದಿಯನ್ನು ಆರಂಭದಲ್ಲಿ ಭದ್ರಾವತಿಯಲ್ಲಿ ಹುಟ್ಟು ಪಡೆದ ದಲಿತ ಸಂಘರ್ಷ ಸಮಿತಿ ಇಡೀ ರಾಜ್ಯದ ತುಂಬೆಲ್ಲಾ ಹಬ್ಬಿಗೊಂಡು ರಾಜ್ಯದಲ್ಲಿ ನಡೆಯುತ್ತಿರುವ ಬೆತ್ತಲೆ ಸೇವೆಯನ್ನು ನಿರ್ಭಂದಿಸಿದರು. ಅನೇಕ ಬಡ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸುವಂತೆ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿ ವಸತಿ ಶಾಲೆಗಳು ಪ್ರಾರಂಭವಾಗುವುದಕ್ಕೆ ಮುಖ್ಯ ಕಾರಣರಾಗಿರುತ್ತಾರೆ. ಅಸ್ಪೃಶ್ಯತೆ ನಿವಾರಣೆಗಾಗಿ ದಲಿತ ಸಂಘರ್ಷ ಸಮಿತಿ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಕೋಟ್ಯಾಂತರ ಕಾರ್ಯಕರ್ತರನ್ನು ಪಡೆದುಕೊಂಡು ಅಸ್ಪೃಶ್ಯತೆ ನಿವಾರಣೆಗೆ ಕಾರಣರಾಗಿರುತ್ತಾರೆ.
ಇಂತಹ ನಾಯಕನ ಜನ್ಮದಿನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ರಾಜ್ಯ ಸಂಚಾಲಕ ಆಯುಷ್ಮಾನ್ ಮಾವಳ್ಳಿ ಶಂಕರವರ ನಾಯಕತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ರೋಣ ತಾಲೂಕ ಸಂಚಾಲಕ ಹನಮಂತ ಚಲವಾದಿ ಮಾತನಾಡಿ, ಆಧುನಿಕ ಕರ್ನಾಟಕದ ಚರಿತ್ರೆ ಬರೆಯುವರೆಗೆ ಸ್ವತಂತ್ರ ಕಾಲಮಾನದಲ್ಲಿ ಘಟಿಸಿದ ದಲಿತ ಚಳುವಳಿ ಮತ್ತು ಕರ್ನಾಟಕ ನೆಲದಲ್ಲಿ ಹುಟ್ಟು ಹಾಕಿದ ಸ್ಥಿತಿವಂತರನ್ನು ದಾಖಲಿಸದಿರಲು ಸಾಧ್ಯವಿಲ್ಲ. 70ರ ದಶಕದ ಹೊತ್ತಿಗೆ ವಿದ್ಯಾವಂತ ಮೊದಲ ದಲಿತ ತಲೆಮಾರು ಕರ್ನಾಟಕದಲ್ಲಿ ಹುಟ್ಟಿ ದಲಿತ ಸಮುದಾಯಗಳ ಮೇಲೆ ಜಾತಿಯ ಕಾರಣಕ್ಕೆ ಆಗುತ್ತಿದ್ದ ಶೋಷಣೆ, ಹಿಂಸೆ, ದೌರ್ಜನ್ಯಗಳ ವಿರುದ್ಧ ಮಾತನಾಡಲು ತೊಡಗಿತ್ತು. ಲೋಹಿಯಾ ಸಮಾಜವಾದಿ ಚಳುವಳಿ ಎತ್ತುತ್ತಿದ್ದ ಜಾತಿ ವಿನಾಶದ ಪ್ರಶ್ನೆಯಿಂದ ಆಕರ್ಷಿತರಾಗಿ ಸಮಾಜವಾದಿ ಚಳುವಳಿಗೆ ಸೇರಿದ ಮೊದಲ ತಲೆಮಾರಿನ ದಲಿತ ಹೋರಾಟಗಾರರಲ್ಲಿ ಪ್ರೊ. ಬಿ. ಕೃಷ್ಣಪ್ಪ ಪ್ರಮುಖರು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಒಕ್ಕೂಟದ ಸಂಚಾಲಕ ನಾಗರಾಜ ಗೋಕಾವಿ, ರೋಣ ತಾಲೂಕ ಸಂಚಾಲಕ ಹನಮಂತ ಚಲವಾದಿ, ಗಜೇಂದ್ರಗಡ ಸಂಚಾಲಕ ಮಹೇಶ ಮಾದರ, ಜಿಲ್ಲಾ ಸಂಘಟನಾ ಸಂಚಾಲಕ ಮುತ್ತಪ್ಪ ಭಜಂತ್ರಿ, ಮಾರುತಿ ಅಂಗಡಿ, ಕೆಂಚಪ್ಪ ಮ್ಯಾಗೇರಿ, ಹೊನ್ನಪ್ಪ ಸಾಕಿ, ಮರಿಯಪ್ಪ ನಡಗೇರಿ, ಮಹಾಂತೇಶ ನಡಗೇರಿ, ಶ್ರೀಧರ ಕಲಾಲ, ಚಂದ್ರು ಡಿ.ಕೆ., ಬಸವರಾಜ ಕಾಳೆ, ಕಳಕಪ್ಪ ಪೋತದಾರ, ಪ್ರವೀಣ ಮಾನಳ್ಳಿ, ಲಕ್ಷ್ಮಣ ವಡ್ಡರಕಲ್ಲ. ಹನಮಂತ ಕಿರಟಗೇರಿ, ಅರುಣ ಹಿರೇಮಠ ಇದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP