ಮಣಿಪುರ ಹಿಂಸಾಚಾರ; ಕೇಂದ್ರದ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ
ನವದೆಹಲಿ, 08 ಜೂನ್ (ಹಿ.ಸ.) : ಆ್ಯಂಕರ್ : ಮಣಿಪುರದಲ್ಲಿ ಮತ್ತೆ ಉಲ್ಬಣಗೊಂಡಿರು ಹಿಂಸಾಚಾರಕ್ಕೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿಸ್ಸಂವೇದನಾಶೀಲತೆ ವಿರುದ್ಧ ವಾಗ್ದಾ
Ramesh


ನವದೆಹಲಿ, 08 ಜೂನ್ (ಹಿ.ಸ.) :

ಆ್ಯಂಕರ್ : ಮಣಿಪುರದಲ್ಲಿ ಮತ್ತೆ ಉಲ್ಬಣಗೊಂಡಿರು ಹಿಂಸಾಚಾರಕ್ಕೆ

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿಸ್ಸಂವೇದನಾಶೀಲತೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರಾಜ್ಯವು ಸುಟ್ಟು ಹೋಗುತ್ತಿರುವಾಗ ಪ್ರಧಾನಿಯವರು ಮೌನ ವಹಿಸಿದ್ದು, ಇದು ದುಃಖಕರ ಮತ್ತು ತೀವ್ರ ಆತಂಕಕಾರಿ,” ಎಂದು ಅವರು ತಿಳಿಸಿದ್ದಾರೆ.

ಮೇ 3, 2023ರಿಂದ ಆರಂಭವಾದ ಸಂಘರ್ಷಕ್ಕೆ ಇಂದಿಗೂ ಅಂತ್ಯ ಸಿಕ್ಕಿಲ್ಲ. ಕೇಂದ್ರ ಸರ್ಕಾರವು ರಚಿಸಿದ ವಿಚಾರಣಾ ಆಯೋಗ ತನ್ನ ವರದಿಯನ್ನು ಸಲ್ಲಿಸಲು ನವೆಂಬರ್ 2025ರ ತನಕ ಕಾಲಾವಕಾಶ ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಕೂಡಾ ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುವವರೆಗೂ, ರಾಜಕೀಯ ಚಟುವಟಿಕೆಗಳು ಗಂಭೀರ ಸಮಸ್ಯೆಗಳನ್ನು ಎದುರಿಸಿತು. ಆದರೂ ರಾಜ್ಯಪಾಲರು ಕೂಡಾ ಸಾರ್ವಜನಿಕವಾಗಿ ಓಡಾಡಲಾಗದ ಸ್ಥಿತಿಯಲ್ಲಿದ್ದಾರೆ.

ರಾಜ್ಯದ ಜನರ ಸಂಕಷ್ಟ ಹಾಗೂ ಕೇಂದ್ರದ ನಿರ್ಲಕ್ಷ್ಯದ ನಡುವೆಯೇ, ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ನಿರೀಕ್ಷೆ ಇನ್ನೂ ದೂರವಾಗಿದೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande