ಭರತಪುರ್, 08 ಜೂನ್ (ಹಿ.ಸ.) :
ಆ್ಯಂಕರ್ : ರಾಜಸ್ಥಾನದಲ್ಲಿ ಗುರ್ಜರ್ ಮೀಸಲಾತಿ ಚಳುವಳಿ ಮತ್ತೊಮ್ಮೆ ಜೋರಾಗಿದ್ದು, ಭರತ್ಪುರದ ಪಿಲುಪುರದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ಗುರ್ಜರ್ ಸಮುದಾಯ ಸರ್ಕಾರಕ್ಕೆ ಮೀಸಲಾತಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಅಂತಿಮ ಗಡುವು ನೀಡಿದೆ.
ವಿಜಯ್ ಬೈನ್ಸ್ಲಾ ನೇತೃತ್ವದ ಗುರ್ಜರ್ ಆರಕ್ಷಣ್ ಸಂಘರ್ಷ ಸಮಿತಿ ಈ ಮಹಾಪಂಚಾಯತ್ ಆಯೋಜಿಸಿತ್ತು. ಸಮುದಾಯದ ನಾಯಕರು, ಪಂಚರು ಹಾಗೂ ಮಾಜಿ ಸರಪಂಚರು, ಸರ್ಕಾರ ಭರವಸೆ ಮುರಿದಿದ್ದು, ಮುಂದಿನ ಹಂತದಲ್ಲಿ ರೈಲು ಹಳಿಗಳನ್ನು ತಡೆಯುವಂತಹ ತೀವ್ರ ಚಳುವಳಿಗೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa