ಅನ್ನದಾನವು ಅತ್ಯಂತ ಶ್ರೇಷ್ಠವಾದ ದಾನ : ಬಟ್ಟೂರು
ಗದಗ, 08 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ಮುಳಗುಂದ ಪಟ್ಟಣದಲ್ಲಿ ಜರುಗಿದ ಗ್ರಾಮ ದೇವತಾ ಟೋಪ ಜಾತ್ರೆಯಲ್ಲಿ ದಿ. ಈರಮ್ಮಾ ಚನ್ನಬಸಪ್ಪ ಕಮಾಜಿ ಇವರ ಸ್ಮರಣಾರ್ಥ ರಾಮಣ್ಣಾ ಕಮಾಜಿ ಸಹೋದರರು ಸ್ವಯಂ ಪ್ರೇರಣೆಯಿಂದ 3 ದಿನ ಅನ್ನ ಪ್ರಸಾದವನ್ನು ನೆರವೇರಿಸಲು ಸಹಕಾರ ನೀಡಿದ ಮಹನೀಯರನ್ನು ಸನ್ಮಾನಿಸಿ ಮಾತ
ಪೋಟೋ


ಗದಗ, 08 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ಮುಳಗುಂದ ಪಟ್ಟಣದಲ್ಲಿ ಜರುಗಿದ ಗ್ರಾಮ ದೇವತಾ ಟೋಪ ಜಾತ್ರೆಯಲ್ಲಿ ದಿ. ಈರಮ್ಮಾ ಚನ್ನಬಸಪ್ಪ ಕಮಾಜಿ ಇವರ ಸ್ಮರಣಾರ್ಥ ರಾಮಣ್ಣಾ ಕಮಾಜಿ ಸಹೋದರರು ಸ್ವಯಂ ಪ್ರೇರಣೆಯಿಂದ 3 ದಿನ ಅನ್ನ ಪ್ರಸಾದವನ್ನು ನೆರವೇರಿಸಲು ಸಹಕಾರ ನೀಡಿದ ಮಹನೀಯರನ್ನು ಸನ್ಮಾನಿಸಿ ಮಾತನಾಡಿದರು.

ಅನ್ನದಾನವು ಅತ್ಯಂತ ಶ್ರೇಷ್ಠವಾದ ದಾನವಾಗಿದೆ ಎಂದು ಎಂ.ಡಿ. ಬಟ್ಟೂರ ಮಾತನಾಡಿದರು. ಮುಳಗುಂದ ಪಟ್ಟಣದಲ್ಲಿ ಗ್ರಾಮ ದೇವತೆ ಜಾತ್ರೆಯ ಸೌಹಾರ್ದತೆಯಿಂದ,ಶಾಂತಿಯುತವಾಗಿ ಜರಗಿದ್ದು, ಸತತ ಮೂರು ದಿನಗಳ ಕಾಲ 35 ಸಾವಿರಕ್ಕಿಂತಲೂ ಹೆಚ್ಚಿನ ಭಕ್ತರಿಗೆ ಪ್ರಸಾದ ಸೇವೆ ಮಾಡಿರುವುದು ಶ್ರೇಷ್ಠವಾದ ಹೇಳಿದರು.

ಈ ಸಂದರ್ಭದಲ್ಲಿ ಬಿ.ವಿ. ಸುಂಕಾಪೂರ, ಕೆ.ಎಲ್. ಕರಿಗೌಡರ, ಸಂಜಯ ನೀಲಗುಂದ, ಅನೂಪ ಕೆಂಚನಗೌಡರ, ವಿಷ್ಣು ಕಬಾಡೆ, ಗಂಗಪ್ಪ ಸುಂಕಾಪೂರ, ಅಶೋಕ ಹುಣಶಿಮರದ, ಮಲ್ಲಪ್ಪ ಕಮಾಜಿ, ಮಲ್ಲೇಶ ಲಾಳಿ, ರಫೀಕ್ ದಲೀಲ, ಯಲ್ಲಪ್ಪ ಕಮಾಜಿ, ಮಾಹಾಂತಪ್ಪ ಪತ್ರಿ, ಬಸವರಾಜ ಮಣ್ಣೂರ, ಪ್ರಕಾಶ ದುರ್ಗಾರ, ಹೊನ್ನಪ್ಪ ನೀಲಗುಂದ, ಶಿವಬಸವ ಹಸಬಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande