ಕೋಲಾರ, 0೮ ಜೂನ್ (ಹಿ.ಸ) :
ಆ್ಯಂಕರ್ : ನಗರದ ಟೇಕಲ್ ರಸ್ತೆಯ ಜಯನಗರ ೭ನೇ ಕ್ರಾಸ್ನಲ್ಲಿ ಆರ್ಯ ವೈಶ್ಯ ಸಮುದಾಯದಿಂದ ನೂತನವಾಗಿ ನಿರ್ಮಿಸಿರುವ ವಾಸವಿ ಸ್ನೇಹಭವನ ಭಾನುವಾರ ಲಕ್ಷ್ಮಿಪೂಜೆಯೊಂದಿಗೆ ಲೋಕಾರ್ಪಣೆಗೊಂಡಿದ್ದು, ಸಾರ್ವಜನಿಕ ಉದ್ದೇಶದೊಂದಿಗೆ ಸಿದ್ದಗೊಂಡಿರುವ ಭವನದ ವಾಸವಿ ಶಾಶ್ವತ ಕಟ್ಟಡ ಸಮಿತಿ ನಿರ್ಮಾಣದ ನೇತೃತ್ವ ವಹಿಸಿತ್ತು.
ಆರ್ಯ ವೈಶ್ಯ ಸಮಾಜದ ಬಂಧುಗಳಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತಮ್ಮ ಕುಟುಂಬದ ಶುಭ ಸಮಾರಂಭಗಳನ್ನು ನಡೆಸಲು ವಾಸವಿ ಶಾಶ್ವತ ಕಟ್ಟಡ ಸಮಿತಿ ತಮ್ಮದೇ ಸಮುದಾಯದ ಹಲವಾರು ಮಂದಿಯ ಸಹಾಯಹಸ್ತದಿಂದ ಅತ್ಯಂತ ಸುಂದರವಾಗಿ ತಲೆಯೆತ್ತಿದೆ.
ಭವನ ಅತ್ಯಂತ ಸುಂದರ ಹಾಗೂ ಸುಸಜ್ಜಿತವಾಗಿದ್ದು, ನೆಲಮಹಡಿಯಲ್ಲಿ ಹವಾನಿಯಂತ್ರಿತ ಸುಂದರ ಡೈನಿಂಗ್ ಹಾಲಿ,ಅಡುಗೆ ಕೋಣೆ, ಮೊದಲ ಮಹಡಿಯಲ್ಲಿ ಸುಂದರ ಹವಾನಿಯಂತ್ರಿತ ಪಾರ್ಟಿ ಹಾಲ್ ನಿರ್ಮಾನಗೊಂಡಿದೆ. ಮೂರನೇ ಮಹಡಿಯಲ್ಲಿ ಅತ್ಯಂತ ಸುಸಜ್ಜಿತವಾದ ೮ ಹವಾನಿಯಂತ್ರಿತ ಕೊಠಡಿಗಳನ್ನು ಹಲವಾರು ದಾನಿಗಳು ತಮ್ಮ ಕುಟುಂಬದ ಹೆಸರಿನಲ್ಲಿ ನಿರ್ಮಿಸಿದ್ದಾರೆ.
ಎರಡು ದಿನಗಳ ಕಾಲ ದೈವೀ ಕಾರ್ಯಗಳೊಂದಿಗೆ ಈ ಸುಂದರ ಭವನವನ್ನು ಲೋಕಾರ್ಪಣೆ ಮಾಡಲು ಸಿದ್ದತೆ ನಡೆಸಿದ್ದು,ವಿಶೇಷ ಪೂಜೆ, ವಾಸ್ತುಹೋಮ, ಲಕ್ಷ್ಮಿಪೂಜೆ,ಹೋಮ,ಹವನಗಳನ್ನು ನಡೆಸಲಾಯಿತು.
ವಾಸವಿ ಶಾಶ್ವತ ಕಟ್ಟಡ ಸಮಿತಿ ಈ ಕಟ್ಟಡವನ್ನು ಸಮುದಾಯದ ಜನತೆ ತಮ್ಮ ಕುಟುಂಬದ ಕಾರ್ಯಕ್ರಮಗಳನ್ನು ನಡೆಸಲು ಅತಿ ಕಡಿಮೆ ಬಾಡಿಗೆ ದರಕ್ಕೆ ಒದಗಿಸಲು ನಿರ್ಧಾರ ಕೈಗೊಂಡಿದ್ದು, ಇತರೆ ಸಮುದಾಯದವರೂ ಸಹಾ ಈ ಕಟ್ಟಡವನ್ನು ಶುಭ ಸಮಾರಂಭಗಳಿಗಾಗಿ ಬಾಡಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದ ನೇತೃತ್ವವನ್ನು ಸಮಿತಿ ಅಧ್ಯಕ್ಷ ಜಿ.ಸಿ.ರಾಜೇಶ್ಬಾಬು, ಕಾರ್ಯದರ್ಶಿ ಜಿ.ಆರ್.ಪ್ರಶಾಂತ್, ನಿಉರ್ದೇಶಕರಾದ ಬಿ.ಎನ್.ನಾಗೇಶ್, ಕೆ.ಎಸ್.ಬಾಲಾಜಿ, ಬಿ.ಎಸ್.ವೆಂಕಟೇಶ್, ಬಿ.ಒ.ಚಿರಂತ್, ವಿ.ಎಸ್.ವೆಂಕಟೇಶಬಾಬು, ಎ.ಎಂ.ಪ್ರೇಮ್ಕುಮಾರ್, ಸಿ.ಎಸ್.ರಮೇಶ್, ಎ.ಎಸ್.ಸುಬ್ರಹ್ಮಣ್ಯ, ಬಿ.ಆರ್.ರೂಪೇಶ್ರ್ಯ, ಎನ್.ಎಸ್.ಅಶ್ವಥ್ಥನಾರಾಯಣಶೆಟ್ಟಿ,ಕ ಬಿಕೆ.ಸುಬ್ರಮಣ್ಯ ಗೋಕುಲ್, ಆರ್.ಎಸ್.ನಾಗರಾಜ್, ಟಿ.ಜಿ.ರಾಘವೇಂದ್ರ ಬಾಲಾಜಿ, ಸಿ.ಜಿ.ರಾಘವೇಂದ್ರಶೆಟ್ಟಿ, ಎ.ಆರ್.ರಾಮಬಾಬು, ಎಸ್.ಪಿ.ವೆಂಕಟೇಶಬಾಬು, ಸಿ.ಆರ್.ಸಂತೋಷ್ ಕುಮಾರ್, ಎಂ.ವೆ0ಕಟೇಶಬಾಬು, ಎ.ಎಂ.ಶ್ರೀನಿವಾಸ್,ಜಿ.ಎಸ್.ಶ್ರೀಧರ್, ಬುಜ್ಜಿ ಮತ್ತಿತರರು ನೇತೃತ್ವ ವಹಿಸಿದ್ದರು.
ಚಿತ್ರ : ಕೋಲಾರ ನಗರದ ಟೇಕಲ್ ರಸ್ತೆಯ ಜಯನಗರ ೭ನೇ ಕ್ರಾಸ್ನಲ್ಲಿ ಆರ್ಯವೈಶ್ಯ ಸಮುದಾಯದಿಂದ ನೂತನವಾಗಿ ನಿರ್ಮಿಸಿರುವ ವಾಸವಿ ಸ್ನೇಹಭವನ ಭಾನುವಾರ ಲೋಕಾರ್ಪಣೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್