ಪೌರ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ : ೭ಜನರ ಬಂಧನ
ಹಾವೇರಿ, 08 ಜೂನ್ (ಹಿ.ಸ.) : ಆ್ಯಂಕರ್ : ಹಾವೇರಿ ನಗರದಲ್ಲಿ ಹುಟ್ಟು ಹಬ್ಬದ ಬ್ಯಾನರ್ ತೆರವು ವಿಚಾರ ಕುರಿತು ಹಲ್ಲೆ ಪ್ರಕರಣ ಸಂಬಂಧ ೭ ಜನರನ್ನು‌ ಪೋಲಿಸರು ಬಂಧಿಸಿದ್ದಾರೆ. ಗುರುವಾರ ನಡೆದ ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ಪೌರಕಾರ್ಮಿಕರು ಮತ್ತು ಮಂಗಳಮುಖಿ ತಂಡದ ನಡುವೆ ದಿನದಿಂದ ದಿನಕ್ಕೆ ವೈಷಮ್
ಪೌರ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ : ೭ಜನರ ಬಂಧನ


ಹಾವೇರಿ, 08 ಜೂನ್ (ಹಿ.ಸ.) :

ಆ್ಯಂಕರ್ : ಹಾವೇರಿ ನಗರದಲ್ಲಿ ಹುಟ್ಟು ಹಬ್ಬದ ಬ್ಯಾನರ್ ತೆರವು ವಿಚಾರ ಕುರಿತು ಹಲ್ಲೆ ಪ್ರಕರಣ ಸಂಬಂಧ ೭ ಜನರನ್ನು‌ ಪೋಲಿಸರು ಬಂಧಿಸಿದ್ದಾರೆ. ಗುರುವಾರ ನಡೆದ ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ಪೌರಕಾರ್ಮಿಕರು ಮತ್ತು ಮಂಗಳಮುಖಿ ತಂಡದ ನಡುವೆ ದಿನದಿಂದ ದಿನಕ್ಕೆ ವೈಷಮ್ಯ ಹೆಚ್ಚಾಗುತ್ತಿದೆ. ಗುರುವಾರ ಪೌರಕಾರ್ಮಿಕರು ತನ್ನ ಮತ್ತು ತನ್ನ ಬೆಂಬಲಿಗರ ಮೇಲೆ‌ ಹಲ್ಲೆ ಮಾಡಿದ್ದಾರೆ ಎಂದು ಮಂಗಳಮುಖಿ ಅಕ್ಷತಾ ಆರೋಪಿಸಿದ್ದರು.

ಈ ಮಧ್ಯೆ ಶನಿವಾರ್ ನಗರದ ಬಾರ್​ನಲ್ಲಿದ್ದ ಪೌರಕಾರ್ಮಿಕ ರಾಜು ದೊಡ್ಡಮನಿ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಬ್ಯಾಟ್ ಹಿಡಿದು ಬಂದ ಗುಂಪು ರಾಜು ಮೇಲೆ ಹಲ್ಲೆ ಮಾಡಿ ಪರಾರಿಯಾಗಿತ್ತು. ತೀವ್ರ ಗಾಯಗೊಂಡಿರುವ ರಾಜು ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಹಲ್ಲೆಗೆ ಮಂಗಳಮುಖಿ ಅಕ್ಷತಾ ಕಾರಣ ಎಂದು ಪೌರಕಾರ್ಮಿಕರು ಅಕ್ಷತಾ ಮತ್ತು ಆಕೆಯ 9 ಬೆಂಬಲಿಗರ ಮೇಲೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ನಗರ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರಕರಣ ಕುರಿತು ಪೊಲೀಸ್ ಇಲಾಖೆ ಬಾರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ‌.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande