ಬದುಕು ಹಸನಾಗಲು ತ್ಯಾಗ ಅತಿ ಮುಖ್ಯ : ಧರ್ಮಗುರು ಮೊಹಮ್ಮದ್ ಸಿದ್ಧಿಕಿ
ಬಳ್ಳಾರಿ, 07 ಜೂನ್ (ಹಿ.ಸ.) : ಆ್ಯಂಕರ್ : ಬದುಕು ಹಸನಾಗಲು ತ್ಯಾಗವೂ ಮುಖ್ಯ ಎಂದು ಮುಸ್ಲಿಂ ಧರ್ಮಗುರು ಸೈಯದ್ ಸಿದ್ದಿಕಿ ಅವರು ತಿಳಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಬಕ್ರೀದ್ ಹಬ್ಬದ ಈ ಸಂದರ್ಭದಲ್ಲಿ ಸಮಾಜ
ಬದುಕು ಹಸನಾಗಲು ತ್ಯಾಗ ಅತಿ ಮುಖ್ಯ :  ಧರ್ಮಗುರು ಮೊಹಮ್ಮದ್ ಸಿದ್ಧಿಕಿ


ಬದುಕು ಹಸನಾಗಲು ತ್ಯಾಗ ಅತಿ ಮುಖ್ಯ :  ಧರ್ಮಗುರು ಮೊಹಮ್ಮದ್ ಸಿದ್ಧಿಕಿ


ಬಳ್ಳಾರಿ, 07 ಜೂನ್ (ಹಿ.ಸ.) :

ಆ್ಯಂಕರ್ : ಬದುಕು ಹಸನಾಗಲು ತ್ಯಾಗವೂ ಮುಖ್ಯ ಎಂದು ಮುಸ್ಲಿಂ ಧರ್ಮಗುರು ಸೈಯದ್ ಸಿದ್ದಿಕಿ ಅವರು ತಿಳಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಬಕ್ರೀದ್ ಹಬ್ಬದ ಈ ಸಂದರ್ಭದಲ್ಲಿ ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ - ಸ್ನೇಹಪರರಾಗಿ ಜೀವನ ನಡೆಸಬೇಕು. ದಾನಕ್ಕೆ ಮಹತ್ವವಿದ್ದು ಎಲ್ಲರಿಗೂ ದಾನ ಹಂಚಿಕೆಯಾಗಬೇಕು ಎಂದರು.

ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಪ್ರಾರ್ಥನೆ 10.30ಕ್ಕೆ ಪೂರ್ಣಗೊಂಡಿತು. ಧರ್ಮ ಗುರುಗಳಾದ ಸ್ಯೆಯದ್ ಗುಲಾಮ್ ಮೊಹಮ್ಮದ್ ಸಿದ್ಧಿಕಿ, ಬಳ್ಳಾರಿ ಜಿಲ್ಲಾ ವಕ್ಫ್‍ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ರಾಜ್ಯಸಭಾಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್, ಪಾಲಿಕೆಯ ಸದಸ್ಯರಾದ ಎನ್.ಎಂ.ಡಿ. ಆಸೀಫ್, ಪೇರಂ ವಿಕ್ಕಿ, ಹರ್ಷಾದ್, ಸಮೀರ್, ಶ್ರೀನಿವಾಸ ಮಿಂಚು, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡರಾದ ಆಯಾಜ್, ಸೈಫುಲ್ಲಾ, ಕಣೇಕಲ್ಲು ಮಹೆಬೂಬ್ ಸಾಬ್, ಹುಸೇನ್ ಪೀರಾ, ರಿಯಾಜ್ ಸರ್ಫರಾಜ್, ಮನ್ಸೂರ್, ಇರ್ಫಾನ್, ದಾದಾ ಸಲ್ಮಾನ್ ಸೇರಿ ಅನೇಕರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande