ನಿಜ ಸಾಧಕರನ್ನು ಅರಸಿ ಗೌರವಿಸುತ್ತಿದೆ ಪದ್ಮಶ್ರೀ : ಜೋಶಿ
ಬೆಂಗಳೂರು, 07 ಜೂನ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ʼಪದ್ಮಶ್ರೀʼ ನಿಜ ಸಾಧಕರನ್ನು ಅರಸಿ ಪುರಸ್ಕರಿಸುತ್ತಿದ್ದು, ಪ್ರಶಸ್ತಿ ಮತ್ತು ಸಾಧಕರ ಮೌಲ್ಯವನ್ನು ವೃದ್ಧಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಬೆಂಗಳೂರಿನಲ್ಲಿ ಅ
Joshi


ಬೆಂಗಳೂರು, 07 ಜೂನ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ʼಪದ್ಮಶ್ರೀʼ ನಿಜ ಸಾಧಕರನ್ನು ಅರಸಿ ಪುರಸ್ಕರಿಸುತ್ತಿದ್ದು, ಪ್ರಶಸ್ತಿ ಮತ್ತು ಸಾಧಕರ ಮೌಲ್ಯವನ್ನು ವೃದ್ಧಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬೆಂಗಳೂರಿನಲ್ಲಿ ಅಬಲಾಶ್ರಮದ 120ನೇ ವರ್ಷಾಚರಣೆ ಹಾಗೂ ಸಂಸ್ಥೆ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ಅವರ ಅಭಿನಂದನೆ ಸಮಾರಂಭ ಉದ್ದೇಶಿಸಿ ಮಾತನಾಡಿ, ಮೊದಲೆಲ್ಲಾ ಪ್ರಶಸ್ತಿ-ಪುರಸ್ಕಾರಕ್ಕೆ ಅರ್ಜಿ, ಶಿಫಾರಸ್ಸು ಪಾತ್ರ ವಹಿಸುತ್ತಿತ್ತು. ಆದರೆ ಇಂದು ಕೇಂದ್ರ ಮಟ್ಟದ ಗೌರವ-ಪುರಸ್ಕಾರಗಳು ನೈಜ ಸಾಧಕರನ್ನು ಅರಸಿ ಸಲ್ಲುತ್ತಿವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಸ್ಥಳೀಯ ಆಡಳಿತ, ಅಧಿಕಾರಿಗಳಿಗೇ ನೈಜ ಸಾಧಕರ ಬಗ್ಗೆ ಮಾಹಿತಿ ಇರುವುದಿಲ್ಲ. ಅಂಥ ಸಮಾಜ ಸೇವಕರನ್ನು, ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿದ್ದಾರೆ. ಈ ಮೂಲಕ ಅವರ ಸೇವಾ ಕೈಂಕರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತ ಬೆಂಬಲವಾಗಿ ನಿಂತಿದ್ದಾರೆ ಎಂದು ಜೋಶಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande