ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಉಳಿವಿಗಾಗಿ ಮುನ್ನೂರು ಕಾಪು ಸಮಾಜ ಪ್ರಯತ್ನ- ಎನ್ಎಸ್ ಬೋಸರಾಜು
ರಾಯಚೂರು, 07 ಜೂನ್ (ಹಿ.ಸ.) : ಆ್ಯಂಕರ್ : ಪ್ರತೀ ವರ್ಷ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಉಳಿವಿಗಾಗಿ ಮುನ್ನೂರು ಕಾಪು ಸಮಾಜದ ವತಿಯಿಂದ ಆಯೋಜಿಸುವ ಮುನ್ನೂರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಕಾರ್ಯಕ್ರಮ ಆಯೋಜಿಸುವುದು ಶ್ಲಾಘನೀಯವಾಗಿದೆ‌. ಮುನ್ನೂರು ಕಾಪು ಸಮಾಜ ಎಲ್ಲಾ ಸಮುದಾಯಗಳನ್ನು ಗೌರವ
ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಉಳಿವಿಗಾಗಿ ಮುನ್ನೂರು ಕಾಪು ಸಮಾಜ ಪ್ರಯತ್ನ- ಎನ್ಎಸ್ ಬೋಸರಾಜು


ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಉಳಿವಿಗಾಗಿ ಮುನ್ನೂರು ಕಾಪು ಸಮಾಜ ಪ್ರಯತ್ನ- ಎನ್ಎಸ್ ಬೋಸರಾಜು


ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಉಳಿವಿಗಾಗಿ ಮುನ್ನೂರು ಕಾಪು ಸಮಾಜ ಪ್ರಯತ್ನ- ಎನ್ಎಸ್ ಬೋಸರಾಜು


ರಾಯಚೂರು, 07 ಜೂನ್ (ಹಿ.ಸ.) :

ಆ್ಯಂಕರ್ : ಪ್ರತೀ ವರ್ಷ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಉಳಿವಿಗಾಗಿ ಮುನ್ನೂರು ಕಾಪು ಸಮಾಜದ ವತಿಯಿಂದ ಆಯೋಜಿಸುವ ಮುನ್ನೂರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಕಾರ್ಯಕ್ರಮ ಆಯೋಜಿಸುವುದು ಶ್ಲಾಘನೀಯವಾಗಿದೆ‌. ಮುನ್ನೂರು ಕಾಪು ಸಮಾಜ ಎಲ್ಲಾ ಸಮುದಾಯಗಳನ್ನು ಗೌರವಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಎನ್ಎಸ್ ಬೋಸರಾಜು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುನ್ನೂರು ಕಾಪು ಸಮಾಜ ರಾಯಚೂರು ವತಿಯಿಂದ ಆಚರಿಸಲ್ಪಡುವ ಮುಂಗಾರು ಸಾಂಸ್ಕೃತಿ ಕ ಬೆಳ್ಳಿ ಹಬ್ಬ ಅಂಗವಾಗಿ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿವಿಧ ಸಮಾಜದ ಮುಖಂಡರಿಗೆ ಹಾಗೂ ಸಾಧನೆಗೈದ ಸಾಧಕರಿಗೆ ಮುಂಗಾರು ಸಿರಿ ಸಂಪದ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀಗಳ ದಿವ್ಯ ಸಾನಿದ್ಯದೊಂದಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಬೋಸರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿರುವ ಎಲ್ಲಾ ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬಲವರ್ಧನೆಯಾಗಬೇಕಾದರೆ ನಮ್ಮೆಲ್ಲರಲ್ಲಿ ಒಗ್ಗಟ್ಟು ಅಗತ್ಯ. ಒಗ್ಗಟ್ಟಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲರು ಸಹಕರಿಸಬೇಕಾಗಿದೆ ಎಂದರು.

ನಂತರ ಶಾಸಕರಾದ ಶಿವರಾಜ ಪಾಟೀಲ್ ಮಾತನಾಡಿ, ಮುನ್ನೂರು ಕಾಪು ಸಮಾಜ ಒಗ್ಗಟ್ಟಿನಲ್ಲಿ ಉಳಿದೆಲ್ಲ ಸಮಾಜಗಳಿಗೆ ಮಾದರಿಯಾಗಿದೆ. ನಿರಂತರ ವಿಭಿನ್ನ ಪ್ರಯತ್ನದೊಂದಿಗೆ ಎಲ್ಲಾ ಕ್ಷೇತ್ರದಲ್ಲಿ ಮುನ್ನೂರು ಕಾಪು ಜಮಾಜ ಬೆಳೆದಿದೆ ಎಂದು ತಿಳಿಸಿದರು‌.

ಈ ಸಂದರ್ಭದಲ್ಲಿ ಬಿಚ್ಚಾಲಿ ಮಠದ ಶ್ರೀಗಳಾದ ವೀರ ತಪಸ್ವಿ ಶ್ರೀಗಳು, ಸೋಮವಾರ ಪೇಠೆ ಹಿರೇಮಠದ ಶ್ರೀಗಳಾದ ಅಭಿನವ ರಾಚೋಟಿ ಶಿವಾಚಾರ್ಯ ಮಹಾ ಸ್ವಾಮಿಗಳು, ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು, ಮಾಜಿ ಶಾಸಕರಾದ ಎ ಪಾಪರಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ, ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ಕಲಮಲ ಶರಣಪ್ಪ, ಅಯ್ಯಪ್ಪ ಹುಡಾ, ಜಾವೀದ್ ಉಲ್ ಹಕ್, ಶೇಖರ್ ರಡ್ಡಿ ಸೇರಿದಂತೆ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande