ಕೋಲಾರ, ಜೂನ್ 0೭(ಹಿ.ಸ) :
ಆ್ಯಂಕರ್ : ಕೇಂದ್ರದಲ್ಲಿ ರೈಲ್ವೆ ರಾಜ್ಯ ಸಚಿವನಾಗಿದ್ದಾಗ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಪ್ಯಾಕ್ಟರಿಗೆ ಅಂದಿನ ಯುಪಿಎ ಸರ್ಕಾರದ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಯೋಜನೆಗೆ ಸುಮಾರು ೧೨೦೦ ಎಕರೆ ಜಮೀನಿನ ಅವ್ಯಶ್ಯಕತೆ ಇದ್ದು. ಅಂದು ನಾನು ಕೇಂದ್ರದ ರೈಲ್ವೆ ಸಚಿವನಾದಾಗ ಜಾರಿಗೊಳಿಸಿದ್ದ ಈ ಪ್ರಮುಖ ಯೋಜನೆಯಾಗಿದ್ದು ಅಲ್ಲಿ ಸರ್ಕಾರದ ಜಮೀನಿ ಈಗಾಗಲೇ ೭೦೦ ಎಕರೆ ಮೀಸಲಿಟ್ಟಿದ್ದು ಉಳಿದ ೫೦೦ ಎಕರೆ ಜಮೀನನ್ನು ತಾವು ಅನವು ಮಾಡಿ ಸರ್ಕಾರ ಎಲ್ಲಾ ರೀತಿಯಲ್ಲಿ ತಮಗೆ ಸಹಕಾರಿಯಾಗಲಿದ್ದು ತಾವು ಈ ಯೋಜನೆಯನ್ನು ತ್ವರಿತಗತಿಯಲ್ಲಿ ಚಾಲನೆ ನೀಡಲು ಕ್ರಮ ವಹಿಸಬೇಕು ಎಂದು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಹಚ್.ಮುನಿಯಪ್ಪ ಕೇಂದ್ರ ರೈಲ್ವೆ ಖಾತೆ ಸೋಮಣ್ಣನವರನ್ನು ಒತ್ತಾಯಿಸಿದರು.
ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ರವರ ನೇತೃತ್ವದಲ್ಲಿ ಶನಿವಾರ ಬೆಂಗಳೂರಿನ ಕುಮಾರ ಕೃಪದಲ್ಲಿ ನಡೆದ ಸಭೆಯಲ್ಲಿ ಕೆ.ಹೆಚ್.ಮುನಿಯಪ್ಪ ಭಾಗವಹಿಸಿ ಮಾತನಾಡಿದರು.
ಕೇಂದ್ರದಲ್ಲಿ ರೈಲ್ವೆ ಸಚಿವನಾಗಿದ್ದಾಗ ಅಂದು ಜಾರಿಗೊಳಿಸಿದ್ದ ಪ್ರಮುಖ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡಲು ಶನಿವಾರ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಹೆಚ್. ಮುನಿಯಪ್ಪ ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ದೇಶದ ಪ್ರಗತಿಗಾಗಿ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಸ್ವಾಗತಿಸುತ್ತೇನೆ. ತಮ್ಮ ಕ್ರಿಯಾ ಯೋಜನೆಗಳು ಸುಮಾರು ೫೦ ವರ್ಷಗಳ ದೂರದೃಷ್ಟಿಯಾಗಿರಬೇಕು. ವರ್ತುಲ ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ಕೃಷಿ ಹಾಗೂ ನೀರಾವರಿ ಭೂಮಿಯನ್ನು ಹೊರತುಪಡಿಸಿ ರಸ್ತೆಗಳ ನಿರ್ಮಾಣಕ್ಕೆ ಹೊತ್ತು ನೀಡಬೇಕು. ಹಳ್ಳಿಗಳಲ್ಲಿ ಹಾದು ಹೋಗುವ ರಸ್ತೆಗಳು ನಾಗರೀಕರಿಗೆ ಅನಾನುಕೂಲ ಉಂಟುಮಾಡದೆ ಇರುವ ಹಾಗೆ ಇನ್ನೂ ೫ ಅಥವ ೬ ಕಿ.ಮೀ ಮುಂದೋಗಿ ಹಳ್ಳಿಗಳ ಜನರಿಗೆ ತೊಂದರೆ ಯಾಗದ ರೀತಿಯಲ್ಲಿ ರಸ್ತೆಗಳ ನಿರ್ಮಾಣ ಮಾಡಬೇಕು ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಇಲ್ಲಿನ ಜನಸಂಖ್ಯೆ ಮತ್ತು ಇಲ್ಲಿ ಬೆಳೆಯುತ್ತಿರುವ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂವಾಗುವ ರೀತಿಯಲ್ಲಿ ತಾವು ರೈಲ್ವೆ ಯೋಜನೆಗಳನ್ನು ವಿಸ್ತರಿಸುತ್ತಿದ್ದು ಅದು ಸಾಮನ್ಯ ನಾಗರಿಕರಿಗೂ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಿ ಅನುಕೂಲ ಮಾಡಬೇಕು
ನಗರದಲ್ಲಿ ಮೆಟ್ರೋ ಕನೆಕ್ಟವಿಟಿ ಹೆಚ್ಚಾಗಿರುವುದರಿಂದ ಅದು ಅನುಕೂಲಕರವಾಗುವ ಹಾಗೆ ಯೋಜನೆಗಳನ್ನು ರೂಪಿಸಬೇಕಾಗುತ್ತದೆ ತಾವು ಯಾವುದೇ ಕಾರ್ಯಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸುವ ಮೂಲಕ ಅದರ ಕುರಿತು ಚರ್ಚೆ ನಡೆಸಿದಾಗ ಅವು ಅನುಕೂಲಕರವಾಗಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನ ವೇಗವಾಗಿರುವ ಕಾರಣ ತಾವು ಸ್ಮಾರ್ಟ್ ಹಾಗಿ ಕಾರ್ಯನಿರ್ವಹಿಸಿದಾಗ ಜನಸಾಮಾನ್ಯರಿಗೆ ಅನುಕೂಲಕರ ವಾಗುತ್ತದೆ. ಲೆವೆಲ್ ಕ್ರಾಸಿಂಗ್ ರಸ್ತೆ ಗಳಾದ ಯಲಹಂಕ ದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ ಬಂಗಾರಪೇಟೆ ಕಡೆ ನಿರ್ಮಾಣವಾದಾಗ ಅದು ಅನುಕೂಲಕರವಾಗಿರುತ್ತದೆ. ನನ್ನ ಬಹುದಿನಗಳ ಕನಸಾದ ರೈಲ್ವೆ ಕೋಚ್ ಪ್ಯಾಕಟ್ರಿ ಅನ್ನು ಕೋಲಾರದಲ್ಲಿ ನಿರ್ಮಾಣ ಮಾಡಲು ತಾವು ಅನುಮತಿಸಿ ಚಾಲನೆ ನೀಡಬೇಕು ದಕ್ಷಣ ಭಾರತದಲ್ಲಿ ಅದು ಕೋಲಾರದಲ್ಲಿ ಈ ರೈಲ್ವೆ ಕೋಚ್ ಪ್ಯಾಕಟ್ರಿ ನಿರ್ಮಾಣ ವಾದಲ್ಲಿ ಈ ಭಾಗದಲ್ಲಿ ಹೆಚ್ಚಿನ ಜನಕ್ಕೆ ಅನುಕೂಲಕರ ವಾಗಲಿದೆ
ರೈಲ್ವೆ ಭೋಗಿಗಳ ನಿರ್ಮಾಣದಿಂದ ನಮ್ಮ ದಕ್ಷಣ ಭಾರತದ ರಾಜ್ಯಕ್ಕೆ ಹೆಸರುವಾಸಿಯಾಗಿತ್ತದೆ.
ಸಭೆಯಲ್ಲಿ ಕೇಂದ್ರದ ಕೌಶಲ್ಯ ಅಭಿವೃದ್ಧಿ ಸಚಿವರಾದ ಕುಮಾರಿ ಶೋಭಾ ಕರಂದಲ್ಲಾಜೆ ,ಸಂಸದರಾದ ಡಾ.ಕೆ ಸುಧಾಕರ್, ಪಿಸಿ.ಮೋಹನ್ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದರಾದ ಸಿ.ಎನ್.ಮಂಜುನಾಥ್ ಹಾಗೂ ಅಶುತೋಷ್ ಕುಮಾರ್ ಸಿಂಗ್ ಡಿಆರ್ಎಂ, ಪರಿಶಿತ್ ಮೋಹನ್ಪುರಿಯಾ ಎಡಿಆರ್ಎಂ (ಜಿ), ಅಜಯ್ ಶರ್ಮಾ – ಕಟ್ಟಡ ಕಾರ್ಯನಿರ್ವಹಣಾ ಸಿಇಒ, ಅಶುತೋಷ್ ಕುಮಾರ್ ಮಥುರ – ಎಡಿಆರ್ಎಂ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಮಂಜುನಾಥ್ ಕನಮಡಿ – ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕೃಷ್ಣ ಚೈತನ್ಯ – ಹಿರಿಯ ವಾಣಿಜ್ಯ ವ್ಯವಸ್ಥಾಪಕ, ಸುಶ್ರೀ ಪ್ರಿಯಾ – ಹಿರಿಯ ಕಾರ್ಯನಿರ್ವಹಣಾ ವ್ಯವಸ್ಥಾಪಕಿ,ಪ್ರಣೇಶ್ ಕೆ.ಎನ್. – ಸಾರ್ವಜನಿಕ ಸಂಪರ್ಕಾಧಿಕಾರಿ ಸಭೆಯಲ್ಲಿ ಭಾಗವಹಿಸಿದ್ದರು.
ಚಿತ್ರ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ರವರು ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣನವರನ್ನು ಭೇಟಿಯಾಗಿ ಕೋಲಾರ ಜಿಲ್ಲೆ ಶ್ರೀನಿವಾಶಪುರದಲ್ಲಿ ಕೋಚ್ ಫ್ಯಾಕ್ಟರಿ ಆರಂಭಿಸಲು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್