ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿಯಾದ ಜೆಡಿಯು ಮುಖಂಡರು
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿಯಾದ ಜೆಡಿಯು ಮುಖಂಡರು
ಕೋಲಾರ ಜಿಲ್ಲಾ ಜೆಡಿಯು ಮುಖಂಡರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಪ್ರಸಕ್ತ ರಾಜಕಾರಣದ ಬಗ್ಗೆ ಚರ್ಚೆ ಮಾಡಿದರು.


ಕೋಲಾರ, ೦೭ ಜೂನ್ (ಹಿ.ಸ) :

ಆ್ಯಂಕರ್ : ಜೆಡಿಯು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ಮನೀಶ್ ಕುಮಾರ್ ವರ್ಮಾ, ಪಕ್ಷದ ರಾಜ್ಯ ಅಧ್ಯಕ್ಷ ಮಾಜಿ ಶಾಸಕ ಮಹಿಮ ಪಟೇಲ್ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ನಾಗರಾಜ್ ಮತ್ತು ಇತರೆ ಪದಾಧಿಕಾರಿಗಳು ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ಪಕ್ಷದ ಹಿರಿಯ ರಾಜಕಾರಣಿ ಎಚ್.ಡಿ. ದೇವೇಗೌಡರವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಮುಂಬರುವ ಚುನಾವಣೆಗಳ ಕುರಿತಂತೆ ಚರ್ಚಿಸಲಾಯಿತು.

ಮನೀಶ್ ಕುಮಾರ್ ಶರ್ಮ ಅವರು ಜೆಡಿಯು ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸುವುದು ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕಲ್ಲಂಡೂರು ಡಾ ಕೆ.ನಾಗರಾಜ್ ರವರನ್ನು ಆಯ್ಕೆ ಎನ್.ಡಿ.ಎ ಮೈತ್ರಿ ಕೂಟದಿಂದ ನಾವೆಲ್ಲ ಸೇರಿ ಗೆಲ್ಲಿಸಲು ಸಹಕರಿಸಬೇಕು ಮುಂದಿನ ಜಿಪಂ ತಾಪಂ ಚುನಾವಣೆಗೂ ಜೆಡಿಯು ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದು ಡಾ ನಾಗರಾಜ್ ಗೆಲುವ ಹಾಗೂ ರಾಜ್ಯದಲ್ಲಿ ಜೆಡಿಯು ಪಕ್ಷದ ಹಿಂದಿನ ಗತವೈಭವ ತರುವುದು ಮುಖ್ಯ ಗುರಿಯಾಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು

ಬಿಹಾರ ರಾಜ್ಯದ ಸಿಎಂ ನಿತೀಶ್ ಕುಮಾರ ಅವರ ಸಲಹಾ ಸಮಿತಿ ಸದಸ್ಯರಾದ ವಿಶಿಷ್ಟ ಮಂಡಲ್, ಅಜಯ್ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗಂಗೂರ್, ರೈತ ಘಟಕದ ಅಧ್ಯಕ್ಷ ಶ್ರೀನಿವಾಸ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ, ಪ್ರಧಾನ ಕಾರ್ಯದರ್ಶಿಗಳಾದ ರಂಗನಾಥ್, ಲಕ್ಷ್ಮೀ, ಯುವ ಘಟಕದ ಕಾರ್ಯಾಧ್ಯಕ್ಷ ಲಕನ್, ಉಪಾಧ್ಯಕ್ಷರಾದ ಗಂಗರಾಜು, ಡಿ ಜೆ ಪ್ರಭು, ಕಾರ್ಯದರ್ಶಿಗಳಾದ ಕ್ರಾಂತಿ, ಸೂರ್ಯಪ್ರಕಾಶ್ ಮಾಡಿಕ್, ಶಾಂತ ಕುಮಾರಿ, ಶಿಂದೆ, ಶ್ರೀ ಶೈಲ ಗೌಡ, ನಿಲಿಗಿರಿಯಪ್ಪ, ಶಕುಂತಲಾ ಶೆಟ್ಟಿ, ನಾರಾಯಣ ಸ್ವಾಮಿ ಗೌಡ, ಲಕ್ಷ್ಮೀ ಪತ್ತಾರ್, ಹೈಬತ್ತಿ, ಅಂಬರೀಷ್, ಮಂಜುನಾಥ್ ಗೌಡ, ಸುಮ,ಫಿಜ, ನಿರ್ಮಲ, ಚಂದ್ರು, ಸುರೇಶ ಮಲ್ಲಮ್ಮ, ಸುಬ್ರಮಣಿ, ಬಾಬು, ನಾಗರಾಜ್, ಚಿನ್ಮಯ ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾ ಜೆಡಿಯು ಮುಖಂಡರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಪ್ರಸಕ್ತ ರಾಜಕಾರಣದ ಬಗ್ಗೆ ಚರ್ಚೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande