ನವದೆಹಲಿ, 07 ಜೂನ್ (ಹಿ.ಸ.) :
ಆ್ಯಂಕರ್ : ಆಹಾರದಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸುರಕ್ಷಿತ ಮತ್ತು ಶುದ್ಧ ಆಹಾರ ನಿರ್ಣಾಯಕವಾಗಿದೆ, ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರು ಹೇಳಿದರು.
ಇಂದು ವಿಶ್ವದಾದ್ಯಂತ ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತಿದೆ.
ಆಹಾರವೇ ನಮ್ಮ ದೈನಂದಿನ ಇಂಧನ, ಆದ್ದರಿಂದ ಅದರ ಗುಣಮಟ್ಟ ಮತ್ತು ಸುರಕ್ಷತೆ ಅತ್ಯಂತ ಪ್ರಮುಖ. ಈ ವರ್ಷ ದಿನದ ಧ್ಯೇಯ ವಾಕ್ಯ “ಆಹಾರ ಸುರಕ್ಷತೆ ವಿಜ್ಞಾನವು ಕಾರ್ಯರೂಪಕ್ಕೆ ಬರುತ್ತದೆ”, ಎಂಬಾಗಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಹೇಗೆ ಆಹಾರದ ಸುರಕ್ಷತೆಯನ್ನು ಒದಗಿಸುತ್ತದೆ ಎಂಬುದನ್ನು ಹತ್ತಿರದಿಂದ ಪರಿಚಯಿಸುತ್ತದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa