ನವದೆಹಲಿ, 07 ಜೂನ್ (ಹಿ.ಸ.) :
ಆ್ಯಂಕರ್ : ಕಳೆದ 11 ವರ್ಷಗಳಲ್ಲಿ ರೈತರ ಸಮೃದ್ಧಿಗಾಗಿ ತೆಗೆದುಕೊಂಡ ರೈತ ಸ್ನೇಹಿ ಕ್ರಮಗಳು ಮಹತ್ವದ ಫಲ ನೀಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಫಸಲ್ ಬಿಮಾ ಯೋಜನೆ ಹಾಗೂ ಎಂಎಸ್ಪಿಯಲ್ಲಿ ಹೆಚ್ಚಳದಂತಹ ಕ್ರಮಗಳು ರೈತರ ಆದಾಯ ಹೆಚ್ಚಳಕ್ಕೆ ನೆರವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಣ್ಣು ಆರೋಗ್ಯ, ನೀರಾವರಿ ಅಭಿವೃದ್ಧಿ ಸೇರಿದಂತೆ ಕೃಷಿ ಮೂಲಸೌಕರ್ಯಕ್ಕೂ ಸರ್ಕಾರ ಗಮನ ನೀಡಿದ್ದು, ರೈತರು ಈಗ ಸಾಲ ರಹಿತ ಜೀವನ ನಡೆಸುತ್ತಿದ್ದಾರೆ ಎಂದರು. “ಶ್ರಮಜೀವಿ ರೈತರಿಗೆ ಸೇವೆ ಸಲ್ಲಿಸುವುದು ನಮ್ಮ ಸರ್ಕಾರದ ಸೌಭಾಗ್ಯ,” ಎಂದು ಮೋದಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa