ಬೆಂಗಳೂರು, 07 ಜೂನ್ (ಹಿ.ಸ.) :
ಆ್ಯಂಕರ್ : ಆರ್ಸಿಬಿ ತಂಡ ಗೆದ್ದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಏನು ಸಂದೇಶ ಹಂಚಿಕೊಂಡಿದ್ದರು ಎಂಬುದನ್ನು ತೋರಿಸಬೇಕು. ಮಾತು ತಿರುಚುವುದರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಿಸ್ಸೀಮರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಘನತೆಗೆ ತಕ್ಕಂತೆಮಾತನಾಡಲಿ, ಅವರ ಆರೋಗ್ಯ ಬೇರೆ ಸರಿಯಿಲ್ಲ. ಕುಮಾರಸ್ವಾಮಿ ಅವರು ಅದರ ಕಡೆ ಗಮನಕೊಡಲಿ, ರಾಜ್ಯದ ಜನರ ಬಗ್ಗೆ ಚಿಂತನೆ ಮಾಡಲಿ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa