ತ್ಯಾಗ, ಬಲಿದಾನದ ಪ್ರತೀಕವೆ ಬಕ್ರೀದ್ ಹಬ್ಬ- ರವಿ ಬೋಸರಾಜು
ರಾಯಚೂರು, 07 ಜೂನ್ (ಹಿ.ಸ.) : ಆ್ಯಂಕರ್ : ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬ ಕೋಮು ಸೌಹಾರ್ದತೆಯ ಸಂಕೇತವಾಗಿದೆ. ನಾವೆಲ್ಲರು ಜಾತಿ-ಮತ-ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಹಬ್ಬ-ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ಸದಾಕಾಲ ನೆಲಸಲಿದೆ ಕಾಂಗ್ರೆ
ತ್ಯಾಗ, ಬಲಿದಾನದ ಪ್ರತೀಕವೆ ಬಕ್ರೀದ್ ಹಬ್ಬ- ರವಿ ಬೋಸರಾಜು


ತ್ಯಾಗ, ಬಲಿದಾನದ ಪ್ರತೀಕವೆ ಬಕ್ರೀದ್ ಹಬ್ಬ- ರವಿ ಬೋಸರಾಜು


ತ್ಯಾಗ, ಬಲಿದಾನದ ಪ್ರತೀಕವೆ ಬಕ್ರೀದ್ ಹಬ್ಬ- ರವಿ ಬೋಸರಾಜು


ರಾಯಚೂರು, 07 ಜೂನ್ (ಹಿ.ಸ.) :

ಆ್ಯಂಕರ್ : ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬ ಕೋಮು ಸೌಹಾರ್ದತೆಯ ಸಂಕೇತವಾಗಿದೆ. ನಾವೆಲ್ಲರು ಜಾತಿ-ಮತ-ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಹಬ್ಬ-ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ಸದಾಕಾಲ ನೆಲಸಲಿದೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿ ಮುಸ್ಲೀಂ ಬಂದುಗಳಿಗೆ ಪರಸ್ಪರ ಶುಭ ಕೋರಿದರು.

ಯಕ್ಲಾಸಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಈದ್ಗಾ ಮೈದಾನದ ಆವರಣದಲ್ಲಿ ಮುಸ್ಲೀಂ ಬಾಂದವರೂ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಾಡಿನಲ್ಲಿ ಶಾಂತಿ, ಸುಭಿಕ್ಷೆ ನೆಲೆಸುವಂತೆ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಶಾಲಾಂ, ಜಾವಿದ್ ಉಲ್ಲ್ ಹಕ್, ನರಸಿಂಹಲು ಮಾಡಗಿರಿ, ಬಿ ರಮೇಶ್, ಫರೀದ್ ಮೌಲಾನ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande