ಗದಗ, 05 ಜೂನ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಸಮಾರಂಭದಲ್ಲಿ ಅತಿಥಿಗಳಾಗಿ ಡಾ. ಉಮೇಶ ಪುರದ ಅವರು ಭಾಗವಹಿಸಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವಿಕರಿಸಿ ಮಾತನಾಡಿ ಪ್ರಪಂಪಚವನ್ನು ಹೇಗೆ ರಕ್ಷಣೆ ಮಾಡಬೇಕೆನ್ನುವ ಹಿನ್ನೆಲೆಯಲ್ಲಿ ಹಾಗೂ ಮಾನವನ ಜೀವನದಲ್ಲಿ ಪರಿಸರದ ಪಾತ್ರವನ್ನು ಕುರಿತು ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.
ಪರಿಸರವು ಪಂಚಮಹಾಭೂತಗಳಿಂದ ನಿರ್ಮಿತವಾಗಿದ್ದು, ಮನುಷ್ಯನ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದ್ದು ಮನಸ್ಸು ಮತ್ತು ದೇಹವನ್ನು ಶುದ್ಧಿಕರಿಸುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದು ಹೇಳುತ್ತಾ, ಪರಿಸರಕ್ಕೆ ಯಾರು ವಿರುದ್ಧವಾಗಿ ನಡೆದುಕೊಳ್ಳಬಾರದು ಸೃಷ್ಠಿ ಮುನಿಸಿಕೊಂಡರೆ ಹಲವಾರು ರೋಗಗಳು ಹುಟ್ಟಿಕೊಳ್ಳುತ್ತವೆ ಇದಕ್ಕೆ ನಿದರ್ಶನವೆಂಬಂತೆ ಇತ್ತೀಚಿಗೆ ಮನುಷ್ಯನನ್ನು ಮಾರಣಾಂತಿಕವಾಗಿ ಕಾಡುತ್ತಿರುವ ರೋಗಗಳನ್ನು ಉದಾಹರಿಸಿ ಪರಿಸರ ದಿನಾಚರಣೆ ಕೇವಲ ಇಂದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಪ್ರತಿ ದಿನ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾ ಪರಿಸರ ಸಂರಕ್ಷಣೆ ಮಾಡಬೇಕು ಮತ್ತು ಪ್ರತಿ ದಿನ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸಬೇಕೆಂದು ಯುವಕರಿಗೆ ಕಿವಿ ಮಾತು ಹೇಳುತ್ತಾ ಪರಿಸರದಲ್ಲಿ ಇರುವ ತುಳಸಿ, ಅಶ್ವಗಂಧ, ಲವಳಸರ, ಅಮೃತ ಬಳ್ಳಿ, ಅಡಸಾಲ ಹಾಗೂ ಬೆಟ್ಟದ ನೆಲ್ಲಿಕಾಯಿಗಳ ಬಳಕೆ ಆರೋಗ್ಯಕ್ಕೆ ಎಷ್ಟು ಉತ್ತಮವೆನ್ನುವುದನ್ನು ಸವಿಸ್ತಾರವಾಗಿ ತಿಳಿಸಿದರು. ತಮ್ಮ ಭಾಷಣದ ಮಧ್ಯದಲ್ಲಿ ಕಪ್ಪತಗುಡ್ಡದ ಉಳಿವಿಗಾಗಿ ಲಿಂ. ಪೂಜ್ಯ ಶ್ರೀ ಸಿದ್ಧಲಿಂಗ ಶ್ರೀಗಳ ಹೋರಾಟವನ್ನು ಸ್ಮರಿಸಿಕೊಂಡು ಕಪ್ಪತ್ತ ಗುಡ್ಡದ ತನ್ನಿಮಿತ್ಯ ಗದಗ ಎರಡನೇ ಅತೀ ದೊಡ್ಡ ಆಕ್ಸಿಜನ್ ನೀಡುವ ಸ್ಥಳವಾಗಿದೆ ಎಂದು ಹೇಳುತ್ತಾ ಪ್ರತಿಯೊಬ್ಬರು ಹಿತಮಿತವಾದ ಆಹಾರ ಸೇವನೆ ಮಾಡಿ ಅರಿಷಡ್ವರ್ಗಗಳಿಂದ ದೂರವಿದ್ದು ಉತ್ತಮ ಆರೋಗ್ಯವನ್ನು ಹೊಂದಬೇಕೆಂದು ತಿಳಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ ಎಂ. ಎಂ. ಬುರಡಿಯವರು ಮಾತನಾಡಿ ಡಾ. ಪುರದ ಅವರು ಪಾಶ್ರ್ವವಾಯು ರೋಗದ ವೈದ್ಯಕೀಯ ವೃತ್ತಿಯನ್ನು ನೆನೆಯುತ್ತಾ ಪ್ಲಾಸ್ಟಿಕ ಬಳಕೆ ನಿಷೇಧ 2025ರ ವಿಶ್ವ ಪರಿಸರ ದಿನಾಚರಣೆಯ ಘೋಷಣೆಯಾಗಿದೆ ಎಂಬುದನ್ನು ತಿಳಿಸುತ್ತಾ ಮನುಷ್ಯನಲ್ಲಿ ಧನಾತ್ಮಕ ಆಲೋಚನೆ ಮತ್ತು ಅವನ ಸುತ್ತಲೂ ಪರಿಶುದ್ಧ ಪರಿಸರ ಇದ್ದರೆ ದಿರ್ಘಾಯುಷ್ಯದ ಆರೋಗ್ಯ ಬೆಳೆಯುತ್ತದೆ ಹಾಗೂ ನಿಸರ್ಗದಲ್ಲಿರುವ ವನಸ್ಪತಿಗಳನ್ನು ಸಂರಕ್ಷಣೆ ಮಾಡಿಬೇಕೆಂದು ತಿಳಿ ಹೇಳಿದರು. ವೇದಿಕೆಯ ಮೇಲೆ ಪ್ರೊ. ಎಸ್.ಎಚ್ ಕಿಂದ್ರಿ ಉಪಸ್ಥಿತರಿದ್ದರು.
ಸಮಾರಂಭವು ಕುಮಾರಿ ಸೌಮ್ಯ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲ್ಪಟ್ಟಿತು ಕುಮಾರಿ ನೇತ್ರಾವತಿ ಸ್ವಾಗತಿಸಿ ಪರಿಚಯಿಸಿದರು. ಕುಮಾರ ನಾಗರಾಜ ಕೋಟಿ, ಕುಮಾರಿ ದೇವಮ್ಮ ಪೂಜಾರ, ಕುಮಾರಿ ತ್ರಿವೇಣಿ ಬಿದರಣ್ಣನವರ ಹಾಗೂ ಕುಮಾರಿ ಸೌಮ್ಯ ಇವರುಗಳು ವ್ಯಕ್ತಿ ಜೀವನದಲ್ಲಿ ಪರಿಸರದ ಪಾತ್ರವನ್ನು ಕುರಿತು ಮಾತನಾಡಿದರು. ಕುಮಾರ ಹನುಮಂತ ಅವರು ವಂದಿಸಿದರೆ ಕುಮಾರ ಅಮೀರಖಾನ ಹಾಗೂ ಕುಮಾರಿ ಪೂಜಾ ಭಂಡಾರಿ ಅವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Lalita MP