ಕಲಬುರಗಿ, 05 ಜೂನ್ (ಹಿ.ಸ.) :
ಆ್ಯಂಕರ್ : ಪಟ್ಟಣದ ಶ್ರೀ ವಿದ್ಯಾ ಭಾರತಿ ಪ್ರಾಥಮಿಕ ಶಾಲೆಯಲ್ಲಿ, 2025–26ನೇ ಶೈಕ್ಷಣಿಕ ವರ್ಷವನ್ನು ವಿಶೇಷ ರೀತಿಯಲ್ಲಿ ಆರಂಭಿಸಿದರು. ತರಗತಿಗೆ ಬಂದ ಮಕ್ಕಳಿಗೆ ಶಿಕ್ಷಕರು ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಪುಷ್ಪಾರ್ಚನೆ ಮಾಡಿ ಶಿಕ್ಷಕರು ತಮ್ಮ ಪ್ರೀತಿಯ ಸೆಳೆತದಿಂದ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಹೂವಿನ ವಾಸನೆಯಿಂದ ಮೈಮನ ಹರಿದ ಈ ಸ್ವಾಗತದಿಂದ ಮಕ್ಕಳ ಮುಖದಲ್ಲಿ ಹಾಸ್ಯವಾಡಿದ ಸಂತೋಷ ಸ್ಪಷ್ಟವಾಗಿತ್ತು.
ಶಾಲೆಗೆ ಮೊದಲ ಬಾರಿಗೆ ಬಂದ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ತರಗತಿಯವರಿಗೆ ಎಲ್ಲರೂ ಈ ಪ್ರೀತಿ ಭರಿತ ಸ್ವಾಗತಕ್ಕೆ ಅಚ್ಚರಿ ಹಾಗೂ ಆನಂದ ವ್ಯಕ್ತಪಡಿಸಿದರು.
ಈ ರೀತಿಯ ಆಚರಣೆಗಳು ಶಿಕ್ಷಣ ಸಂಸ್ಥೆಗಳ ಮಾನವೀಯ ಮುಖವನ್ನೂ, ಮಕ್ಕಳ ಭವಿಷ್ಯದ ಮೆರುಗುಗೂ ದಾರಿ ತೋರಿಸುತ್ತವೆ.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷರಾದ ಸಿದ್ದು ಪೂಜಾರಿ, ಕಾರ್ಯದರ್ಶಿಗಳಾದ ಸುನೀತಾ ಎಸ್ .ಪೂಜಾರಿ , ಭೀಮಾಶಂಕರ ಜಮಾದಾರ, ಸಾಯಿಬಣ್ಣ ಜಮಾದಾರ ಸಿದ್ದು ಶಿವಣಗಿ, ಸೇರಿದಂತೆ ಶಿಕ್ಷಕರು ಮತ್ತು ಶಿಕ್ಷಕೀಯರು ಮಕ್ಕಳು ಹಾಗೂ ಪಾಲಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / Samarth biral