ಪರಿಸರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗದಿರಲಿ : ಎಮ್.ಡಿ. ಹದ್ದಣ್ಣವರ
ಗದಗ, 05 ಜೂನ್ (ಹಿ.ಸ.) : ಆ್ಯಂಕರ್ : ಸಮಾಜದಲ್ಲಿರುವ ಪ್ರತಿಯೊಬ್ಬರೂ ಗಿಡ-ಮರಗಳನ್ನು ಸಂರಕ್ಷಣೆ ಮಾಡಿದರೇ ಮಾತ್ರ ಮನುಕುಲದ ಉದ್ಧಾರವಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವಾಗಿದೆ. ಪರಿಸರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗದಿರಲಿ, ಪ್ರತಿ ದಿನವೂ ಪರಿಸರ ದಿನವೆಂದು ಆಚರಿಸಬೇಕು. ನಾವು ಗ
ಪೋಟೋ


ಗದಗ, 05 ಜೂನ್ (ಹಿ.ಸ.) :

ಆ್ಯಂಕರ್ : ಸಮಾಜದಲ್ಲಿರುವ ಪ್ರತಿಯೊಬ್ಬರೂ ಗಿಡ-ಮರಗಳನ್ನು ಸಂರಕ್ಷಣೆ ಮಾಡಿದರೇ ಮಾತ್ರ ಮನುಕುಲದ ಉದ್ಧಾರವಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವಾಗಿದೆ. ಪರಿಸರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗದಿರಲಿ, ಪ್ರತಿ ದಿನವೂ ಪರಿಸರ ದಿನವೆಂದು ಆಚರಿಸಬೇಕು. ನಾವು ಗಿಡ ನೆಟ್ಟು, ಪೋಷಿಸುವುದೂ ಪ್ರತಿ ದಿನ ಪರಿಸರ ದಿನ ಆಚರಣೆಗೆ ಸಮವಾಗುತ್ತದೆಂದು ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಮಂಜುನಾಥ ದು. ಹದ್ದಣ್ಣವರ ಹೇಳಿದರು.

ಇವರು ವಿಶ್ವ ಕಲ್ಯಾಣ ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅಥಿತಿಗಳಾಗಿ ಮಾತನಾಡಿ, ವಿಶೇಷ ಚೇತನರಿಂದ ಗಿಡ ನೆಟ್ಟು, ಗಿಡ-ಮರಗಳಿಗೆ ನೀರು ಹಾಕುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗೋಣವೆಂದು ಹೇಳಿ. ವಿಶೇಷ ಚೇತನರೊಂದಿಗೆ ಸುತ್ತಮುತ್ತಲಿನ ಗಿಡ-ಮರಗಳಿಗೆ ನಿರಂತರವಾಗಿ ನೀರು ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಮಂಜುನಾಥ ಆಸಂಗಿ, ಫಿರೋಜ ಸಂಕನಾಳ, ರಮೇಶ ಕಾಳೆ, ಶಾಂತಮ್ಮಾ ಹೂಗಾರ, ವಿಶೇಷ ಚೇತನರು, ಪಾಲಕರು, ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ವಿಶೇಷ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ಗಿಡಗಳನ್ನು ನೆಟ್ಟು ಗಿಡ ಮರಗಳಿಗೆ ನೀರು ಹಾಕುವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಸೇವಾ ಕಾರ್ಯವನ್ನು ಮೆಚ್ಚಿ ಸಾರ್ವಜನಿಕರು ವಿಶೇಷ ಚೇತನರಿಗೆ ಸಿಹಿ ಹಾಗೂ ಅಲ್ಪೋಪಹಾರ ಹಂಚಿದ್ದು ತುಂಬಾ ವಿಶೇಷವಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande