ವಜಾಹತ್ ಖಾನ್ ಬಂಧನಕ್ಕೆ ಅಸ್ಸಾಂ ಪೊಲೀಸರ ಹುಡುಕಾಟ
ಕೋಲ್ಕತ್ತಾ, 05 ಜೂನ್ (ಹಿ.ಸ.) : ಆ್ಯಂಕರ್ : ಸಾಮಾಜಿಕ ಮಾಧ್ಯಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪೋಸ್ಟ್‌ಗಳಿಂದ ವಿವಾದದಲ್ಲಿ ಸಿಲುಕಿರುವ ಪಶ್ಚಿಮ ಬಂಗಾಳ ಮೂಲದ ವಜಾಹತ್ ಖಾನ್‌ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದು, ಬುಧವಾರ ರಾತ್ರಿ ಬಂಧನಕ್ಕೆ ಕೋಲ್ಕತ್ತಾದಲ್ಲಿರುವ ಅವರ
ವಜಾಹತ್ ಖಾನ್ ಬಂಧನಕ್ಕೆ ಅಸ್ಸಾಂ ಪೊಲೀಸರ ಹುಡುಕಾಟ


ಕೋಲ್ಕತ್ತಾ, 05 ಜೂನ್ (ಹಿ.ಸ.) :

ಆ್ಯಂಕರ್ : ಸಾಮಾಜಿಕ ಮಾಧ್ಯಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪೋಸ್ಟ್‌ಗಳಿಂದ ವಿವಾದದಲ್ಲಿ ಸಿಲುಕಿರುವ ಪಶ್ಚಿಮ ಬಂಗಾಳ ಮೂಲದ ವಜಾಹತ್ ಖಾನ್‌ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದು, ಬುಧವಾರ ರಾತ್ರಿ ಬಂಧನಕ್ಕೆ ಕೋಲ್ಕತ್ತಾದಲ್ಲಿರುವ ಅವರ ಮನೆಗೆ ಭೇಟಿ ನೀಡಿದರೂ ಅವರು ಪತ್ತೆಯಾಗಲಿಲ್ಲ. ಬಂಧನ ಭೀತಿಯಿಂದ ಭಾನುವಾರದಿಂದ ವಜಾಹತ್ ಕಾಣೆಯಾಗಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಶರ್ಮಿಷ್ಠಾ ಪನೋಲಿ ವಿರುದ್ಧ ದೂರು ನೀಡಿದ್ದವರು. ಇದೀಗ ತಾನೇ ಆರೋಪಿತನಾಗಿದ್ದು ಗಾರ್ಡನ್ ರೀಚ್ ಠಾಣೆಯಲ್ಲಿ ಕೂಡ ಪ್ರತ್ಯೇಕ ದೂರು ದಾಖಲಾಗಿದೆ. ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು ವಜಾಹತ್ ಹಾಜರಾಗಿಲ್ಲ.

ಇನ್ನೊಂದೆಡೆ, ಶರ್ಮಿಷ್ಠಾ ಪನೋಲಿಯ ಬಂಧನವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಂಧನ ವಿಧಾನವನ್ನು ಪ್ರಶ್ನಿಸಿದ ಪನೋಲಿಯ ವಕೀಲರು, ಇದನ್ನು ಕಾನೂನು ಉಲ್ಲಂಘನೆ ಎಂದು ಆಕ್ಷೇಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande