ಐಪಿಎಲ್ ಕ್ರೆಡಿಟಿಗೆ ಪೈಪೋಟಿಗೆ 11 ಯುವಕರು ಬಲಿ : ಗೋವಿಂದಗೌಡ್ರ
ಗದಗ, 05 ಜೂನ್ (ಹಿ.ಸ.) : ಆ್ಯಂಕರ್ : 18 ವರ್ಷಗಳ ಬಳಿಕ ಐಪಿಎಲ್ ಗೆದ್ದ ಆರ್.ಸಿ.ಬಿ ತಂಡಕ್ಕೆ ಸಿಕ್ಕ ಜನರ ಪ್ರೀತಿ ಗೆ ಎಲ್ಲರ ಮನಸೋತ್ತಿದ್ದು ನಿಜ. ಈ ಜನಸ್ತಮೋಹದ ಪ್ರೀತಿ ಹಾಗೂ ಉತ್ಸಾಹವನ್ನು ನೋಡಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಇದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ 11 ಯುವಕರನ್ನ
ಪೋಟೋ


ಗದಗ, 05 ಜೂನ್ (ಹಿ.ಸ.) :

ಆ್ಯಂಕರ್ : 18 ವರ್ಷಗಳ ಬಳಿಕ ಐಪಿಎಲ್ ಗೆದ್ದ ಆರ್.ಸಿ.ಬಿ ತಂಡಕ್ಕೆ ಸಿಕ್ಕ ಜನರ ಪ್ರೀತಿ ಗೆ ಎಲ್ಲರ ಮನಸೋತ್ತಿದ್ದು ನಿಜ. ಈ ಜನಸ್ತಮೋಹದ ಪ್ರೀತಿ ಹಾಗೂ ಉತ್ಸಾಹವನ್ನು ನೋಡಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಇದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ 11 ಯುವಕರನ್ನು ಬಲಿ ಪಡೆದಿದ್ದಾರೆ. ವಿಧಾನ ಸೌಧದ ಮುಂದೆ ಆರ್‌ಸಿಬಿ ತಂಡದ ಸದಸ್ಯರಿಗೆ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ರಾಜ್ಯ ಸರ್ಕಾರದಿಂದ ಏರ್ಪಟ್ಟಿತ್ತು ಇದರ ಶ್ರೇಯಸ್ಸು ಮುಖ್ಯಮಂತ್ರಿಗಳಿಗೆ ಹೋಗಿದೆ ಎಂದು ಉಪಮುಖ್ಯಮಂತ್ರಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲರಿಗೂ ಉಚಿತ ಪ್ರವೇಶವೆಂದು ಘೋಷಣೆ ಮಾಡಿ ಕೇವಲ ಮೂರೇ ಗೇಟುಗಳನ್ನು ತೆರೆದು ಈ ಅವಘಡಕ್ಕೆ ಕಾರಣರಾಗಿದ್ದಾರೆ.

ಅದರ ಕ್ರೆಡಿಟ್ ಪಡೆಯಲು ಹೋಗಿ ಎಲ್ಲಾ ಅವಾಂತರಗಳಿಗೆ ಕಾರಣರಾಗಿದ್ದಾರೆ ತರಾತುರಿಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ ಕೆ ಎಸ್ ಸಿ ಎ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದೆ ಉಪಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಷ್ಟೆಲ್ಲ ಅವಾಂತರಗಳ ಕಾರಣವಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ರಾಜ್ಯ ಸರ್ಕಾರದ ಬೀಜವಾರಿತನವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಹಿಂದೆ ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ನಡೆದ ಆಟಗಾರರ ಸನ್ಮಾನ ಸಮಾರಂಭದಲ್ಲಿ ಇದಕ್ಕಿಂತ ಹತ್ತು ಪಟ್ಟು ಜನ ಸೇರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯಕ್ರಮ ಸುಗಮವಾಗಿ ನಡೆದಿದ್ದು ಎಲ್ಲರಿಗೂ ತಿಳಿದ ವಿಷಯ. ಎಲ್ಲರನ್ನು ಟೀಕಿಸುವ ಎಲ್ಲದಕ್ಕೂ ಟೀಕಿಸುವ ಈ ಸರಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರು ನಿನ್ನೆ ಆರ್‌ಸಿಬಿ ತಂಡದ ಆಟಗಾರರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು,

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಇಷ್ಟು ದೊಡ್ಡ ದುರಂತ ನಡೆದರೂ ಕೂಡ ರಾಜ್ಯದ ಉಪ ಮುಖ್ಯಮಂತ್ರಿಗಳು ಟ್ರಾಫಿಗೆ ಮುತ್ತಿಕುವುದರಲ್ಲಿ ಹಾಗೂ ಪುಕ್ಕಟ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಮಗ್ನರಾಗಿದ್ದರೆ ಹೊರತು ಆ ಕಾರ್ಯಕ್ರಮವನ್ನು ರದ್ದು ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಜೆಡಿಎಸ್ ರಾಜ್ಯದ ಒತ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಡಿಸಿಎಂ ಅವರ ಈ ನಡವಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದಾಗ ಇದೇ ಮಹಾ ನಾಯಕರು ಆ ದುರ್ಘಟನೆಯನ್ನು ರಾಜಕೀಯವಾಗಿ ಬಳಸಿಕೊಂಡರು ಆದರೆ ಈಗ ಇದರಲ್ಲಿ ಯಾರು ರಾಜಕೀಯ ಮಾಡಬಾರದು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ಬಣ್ಣಿಸಿದ್ದಾರೆ, ಮಹಾ ಕುಂಭಮೇಳದಲ್ಲಿ 20 ಕೋಟಿ ಜನ ಒಂದು ದಿನದಲ್ಲಿ ಸೇರಿದ್ದರಿಂದ ಅವತ್ತು ಅವಗಡ ನಡೆದಿತು, ಆದರೆ ನಿನ್ನೇ ಕೇವಲ ಎರಡು ಲಕ್ಷ ಜನಗಳನ್ನು ನಿಯಂತ್ರಿಸಲಾಗದ ಈ ಸರ್ಕಾರ ತನ್ನ ದೌರ್ಬಲ್ಯವನ್ನು ಎತ್ತಿ ತೋರಿಸಿದೆ.

ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯನ್ನು ಮಾಡಿ ಲಕ್ಷ ಜನ ಬರುವ ನಿರೀಕ್ಷೆ ಇರಲಿಲ್ಲ ಎಂದು ನುಳುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಲಕ್ಷ ಅಭಿಮಾನಿಗಳು ಬರುವ ಮುನ್ಸೂಚನೆ ನೀಡದ ನಿಮ್ಮ ಗುಪ್ತದಳದ ವೈಫಲ್ಯವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಕೆಎಸ್‌ಸಿಎ ಮೇಲೆ ಹೊಣೆ ಹಾಕಿ ದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿರುವ ಈ ಸರ್ಕಾರ ಮೃತರ ಕುಟುಂಬಕ್ಕೆ ತಲ ಇಪ್ಪತ್ತೈದು ಲಕ್ಷ ನೀಡಬೇಕೆಂದು ಬಸವರಾಜ ಅಪ್ಪಣ್ಣವರ, ಎಂ ಎಸ್ ಪಾರ್ವತಗೌಡ್ರ, ರಮೇಶ ಹುನಸಿಮರದ, ಸಂತೋಷ ಪಾಟೀಲ, ಪ್ರಫುಲ್ಲ ಪುನೀಕರ, ಪುಲಿಕೇಶಿ ಗಾಲಿ, ಜಿಕೆ ಕೊಳ್ಳಿಮಠ, ಮಂಜುಳಾ ಮೇಟಿ, ಸಿದ್ದಲಿಂಗಯ್ಯ ಹೊಂಬಾಳೆಮಠ, ಶರಣಪ್ಪ ಹೂಗಾರ, ಕಲ್ಕುಸಾ ಸಿಂಗ್ರಿ, ಸರಕಾರವನ್ನು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande