ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆಯಡಿ `ಸ್ವಚ್ಚತಾ ಸೆ ಸಹಕಾರ್'ಗೆ ಚಾಲನೆ
ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆಯಡಿ `ಸ್ವಚ್ಚತಾ ಸೆ ಸಹಕಾರ್'ಗೆ ಚಾಲನೆ
ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ನಗರದ ಕುವೆಂಪು ಉದ್ಯಾನವನದಲ್ಲಿ ಅಂತರರಾಷ್ಟಿçÃಯ ಸಹಕಾರ ವರ್ಷಾಚರಣೆ ಅಡಿಯಲ್ಲಿ ಪ್ರಧಾನಿಯವರು ಮನ್ ಕೀ ಬಾತ್‌ನಲ್ಲಿ ನೀಡಿದ ಸಲಹೆಯಂತೆ ನಡೆಸುತ್ತಿರುವ `ಸ್ವಚ್ಚ ತಾ ಸೆ ಸಹಕಾರ್' ಕಾರ್ಯಕ್ರಮ ನಡೆಯಿತು.


ಕೋಲಾರ, ೦೪ ಜೂನ್ (ಹಿ.ಸ) :

ಆ್ಯಂಕರ್ : ಸಮಾಜಕ್ಕೆ ಆರ್ಥಿಕ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಕಾರಿ ರಂಗವೂ ಜನತೆಯಲ್ಲಿ ಸ್ವಚ್ಚತೆಯ ಅರಿವು ನೀಡುವ ಕೆಲಸ ಮಾಡಲು ಮುಂದಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ `ಸ್ವಚ್ಚ ತಾ ಸೆ ಸಹಕಾರ್' ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಸಂಕಲ್ಪ ಮಾಡಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಡಿ.ಆರ್.ರಾಮಚಂದ್ರೇಗೌಡ ತಿಳಿಸಿದರು.

ನಗರದ ಕುವೆಂಪು ಉದ್ಯಾನವನದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಡಿಯಲ್ಲಿ ಪ್ರಧಾನಿಯವರು ಮನ್ ಕೀ ಬಾತ್‌ನಲ್ಲಿ ನೀಡಿದ ಸಲಹೆಯಂತೆ ನಡೆಸುತ್ತಿರುವ `ಸ್ವಚ್ಚ ತಾ ಸೆ ಸಹಕಾರ್' ಕಾರ್ಯಕ್ರಮದಡಿ `ಏಕ್ ಪೇಸ್ ಮಾ ಕೆ ನಾಮ್' ಹೆಸರಿನಲ್ಲಿ ಸ್ವಚ್ಚತಾ ಕಾರ್ಯ ಮತ್ತು ಗಿಡನೆಡುವ ಕಾರ್ಯಕ್ಕೆಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮವನ್ನು ಮೇ, ಜೂನ್ ತಿಂಗಳಲ್ಲಿ ಕಡ್ಡಾಯವಾಗಿನಡೆಸಲು ಸೂಚಿಸಿದ್ದು, ಸಹಕಾರಿಗಳು ವಾರಕ್ಕೊಂದು ದಿನವಾದರೂ ಸ್ವಚ್ಚತಾ ಕಾರ್ಯ, ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸೋಣ, ಸ್ವಚ್ಚತೆಯ ಕುರಿತುಜಾಗೃತಿ ಮೂಡಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮವು ನಮ್ಮತಾಯಿ ಮತ್ತು ನಮ್ಮ ಭೂಮಿಗೆ ಗೌರವ ಸೂಚಿಸುವ ಸಲುವಾಗಿ ಹಮ್ಮಿಕೊಳ್ಳುತ್ತಿದ್ದು, ಇದನ್ನು ಜಿಲ್ಲೆಯಲ್ಲಿ ವರ್ಷ ಪೂರ್ತಿ ಆಚರಿಸಲು ಯೂನಿಯನ್ ನಿರ್ಧರಿಸಿದೆ ಎಂದು ತಿಳಿಸಿದ ಅವರು, ಎಲ್ಲಾ ಸಹಕಾರಿಗಳು ವಾರಕ್ಕೊಂದು ದಿನ ಇಂತಹ ಕಾರ್ಯ ನಡೆಸೋಣ ಬನ್ನಿ ಎಂದರು.

ಪರಿಸರ ಉಳಿದರೆ ಮಾತ್ರವೇ ಉತ್ತಮ ಜೀವನ ಸಾಧ್ಯ ಎಂದ ಅವರು, ಪ್ರಕೃತಿಯ ಮೇಲೆ ನಾವುನಿರಂತರ ದಾಳಿ ನಡೆಸುತ್ತಿದ್ದೇವೆ ಇದಕ್ಕೆ ಸಾಕ್ಷಿಯೇ ವಿಕೋಪಗಳಿಂದ ಆಗುತ್ತಿರುವ ಹಾನಿ ಎಂದು ಇತ್ತೀಚಿನ ಅನಾವೃಷ್ಟಿಯನ್ನು ಉದಾಹರಿಸಿದರು.

ಕೆರೆಗಳು ನಮ್ಮ ಪರಿಸರದ ಜೀವಾಳವಾಗಿದೆ, ಕಾಡು ನಾಶವಾದರೆ ನಮ್ಮ ಉಳಿವು ಅಸಾಧ್ಯ ಎಂಬ ಸತ್ಯ ಅರಿತು ಸಹಾ ಇಂದು ನಾವು ಕೆರೆಗಳು,ಕಾಡನ್ನು ನಾಶಪಡಿಸುತ್ತಿದ್ದೇವೆ, ಅಕ್ರಮ ಒತ್ತುವರಿ ಮೂಲಕ ಪ್ರಕೃತಿಗೆ ಕಂಟಕವಾಗಿದ್ದೇವೆ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ.ಬೈರೇಗೌಡ ಮಾತನಾಡಿ, ಸಹಕಾರ ತತ್ವ ಸಮಾಜಕ್ಕೆ ಅಗತ್ಯವಾಗಿದೆ, ಆರ್ಥಿಕ ಪ್ರಗತಿ ಮಾತ್ರವಲ್ಲ, ಸಾಮಾಜಿಕ,ಶೈಕ್ಷಣಿಕ ಪ್ರಗತಿಗೂ ಇಂದು ಸಹಕಾರ ರಂಗ ನೆರವಾಗಿ ನಿಂತಿದೆ, ಇದೀಗ ಪರಿಸರ ಸಂರಕ್ಷಣೆಗೂ ಕೈಜೋಡಿಸೋಣ, ಸ್ವಚ್ಚತೆ, ಗಿಡ ನೆಟ್ಟು ಬೆಳೆಸುವ ಕಾಯಕದ ಸಂಕಲ್ಪ ಮಾಡೋಣ ಎಂದರು.

ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಚ್ಚತಾ ಈ ಸಪ್ತಾಹ ವರ್ಷವಿಡೀ ನಡೆಯುವ ಕಾರ್ಯಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಂತರರಾಷ್ಟಿçÃಯ ಸಹಕಾರ ದಿನಾಚರಣೆ ಅಂಗವಾಗಿ ನೀಡಿರುವ ಸೂಚನೆಯಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇಂದು ದೇಶಾದ್ಯಂತ ಚಾಲನೆ ನೀಡಿದ್ದಾರೆ. ಅದರ ಧ್ಯೇಯೋದೇಶವೇ ಸ್ವಚ್ಚತಾ ಸೇ ಸಹಕಾರ ಕಾರ್ಯಕ್ರಮವಾಗಿದೆ ಎಂದರು.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ ವಾಗಿಟ್ಟುಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದ ಅವರು, ಸ್ವಚ್ಚತೆ ಆರೋಗ್ಯದ ಸಂಕೇತವಾಗಿದೆ, ಶುಭ್ರತೆ ಇರುವೆಡೆ ತಾನಾಗಿಯೇ ಉತ್ತಮ ಆರೋಗ್ಯ ಇರುತ್ತದೆ ಎಂದು ತಿಳಿಸಿದರು.

ಸಹಕಾರಿಗಳು ವಾರಕ್ಕೊಂದು ದಿನ ತಮ್ಮ ಊರು, ಬಡಾವಣೆ, ಶಾಲೆ ಆವರಣದಲ್ಲಿ ಸ್ವಚ್ಚತಾ ಅಭಿಯಾನ ನಡೆಸುವ ಮೂಲಕ ಸಮಾಜಕ್ಕೆ ಆದರ್ಶವಾಗೋಣ, ಇದು ಒಂದು ದಿನಕ್ಕೆ ಸೀಮಿತ ಬೇಡ, ನಿರಂತರವಾಗಿ ಈ ಕಾರ್ಯದಲ್ಲಿ ಕೈಜೋಡಿಸೋಣ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕುವೆಂಪು ಉದ್ಯಾನವನ್ನು ಸ್ವಚ್ಚಗೊಳಿಸುವ ಮೂಲಕ `ಸ್ವಚ್ಚ ತಾ ಸೆ ಸಹಕಾರ್' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಅಣ್ಣಿಹಳ್ಳಿ ನಾಗರಾಜ್, ಉರುಗಿಲಿ ರುದ್ರಸ್ವಾಮಿ, ಅರುಣಮ್ಮ, ಪಿ.ಎನ್.ಕೃಷ್ಣಾರೆಡ್ಡಿ, ಹಾಲು ಒಕ್ಕೂಟದ ಈಶ್ವರಪ್ಪ, ಸಹಕಾರಿ ಯೂನಿಯನ್ ಸಿಇಓ ಭಾರತಿ, ಲಕ್ಷ÷್ಮಮ್ಮ, ರವಿಕುಮಾರ್, ಮುರಳಿ, ಗಂಗೋತ್ರಿ, ಸಹಕಾರ ಸಂಘಗಳ ಲೆಕ್ಕರಿಶೋಧನಾ ಇಲಾಖೆಯ ಕವಿತ ಮತ್ತಿತರರು ಹಾಜರಿದ್ದರು.

ಚಿತ್ರ : ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ನಗರದ ಕುವೆಂಪು ಉದ್ಯಾನವನದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಡಿಯಲ್ಲಿ ಪ್ರಧಾನಿಯವರು ಮನ್ ಕೀ ಬಾತ್‌ನಲ್ಲಿ ನೀಡಿದ ಸಲಹೆಯಂತೆ ನಡೆಸುತ್ತಿರುವ `ಸ್ವಚ್ಚ ತಾ ಸೆ ಸಹಕಾರ್' ಕಾರ್ಯಕ್ರಮ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande