ಸಂಭ್ರಮಾಚರಣೆಯನ್ನು ಸೂತಕವನ್ನಾಗಿ ಮಾಡಿದ ರಾಜ್ಯ ಸರ್ಕಾರ:ಸೋಮಣ್ಣ
ಬೆಂಗಳೂರು, 4 ಜೂನ್ (ಹಿ.ಸ.): ಆ್ಯಂಕರ್:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರ್ಘಟನೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಸಂತಾಪ ಸೂಚಿಸಿದ್ದಾರೆ. ಸಂಭ್ರಮಾಚರಣೆಯನ್ನು ಸೂತಕವನ್ನಾಗಿ ಮಾಡಿದ ರಾಜ್ಯ ಸರ್ಕಾರಿ ವ್ಯವಸ್ಥೆಗೆ ಧಿಕ್ಕಾರ ಎಂದಿರುವ ಅವರು, ‌ಕಪ್ ಗೆದ್ದ ಕ್ಷಣಗಳನ್ನು ಸಂಭ್ರಮಿಸಲ
ಸಂಭ್ರಮಾಚರಣೆಯನ್ನು ಸೂತಕವನ್ನಾಗಿ ಮಾಡಿದ ರಾಜ್ಯ ಸರ್ಕಾರ:ಸೋಮಣ್ಣ


ಬೆಂಗಳೂರು, 4 ಜೂನ್ (ಹಿ.ಸ.):

ಆ್ಯಂಕರ್:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರ್ಘಟನೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಸಂತಾಪ ಸೂಚಿಸಿದ್ದಾರೆ.

ಸಂಭ್ರಮಾಚರಣೆಯನ್ನು ಸೂತಕವನ್ನಾಗಿ ಮಾಡಿದ ರಾಜ್ಯ ಸರ್ಕಾರಿ ವ್ಯವಸ್ಥೆಗೆ ಧಿಕ್ಕಾರ ಎಂದಿರುವ ಅವರು,

‌ಕಪ್ ಗೆದ್ದ ಕ್ಷಣಗಳನ್ನು ಸಂಭ್ರಮಿಸಲು ಬಂದಿದ್ದ ಅಭಿಮಾನಿಗಳಿಗೆ ಸರ್ಕಾರದ ವೈಫಲ್ಯ ಸಾವು ನೀಡಿದ್ದು ದುರ್ದೈವ.

ಆಟಗಾರರ ಅಭಿನಂದನಾ ಸಮಾರಂಭ, ತೆರೆದ ವಾಹನದ ಮೆರವಣಿಗೆ ಮಾಡುವ ಬಗ್ಗೆ ನಿನ್ನೆ ರಾತ್ರಿಯೇ ನಿರ್ಧರಿಸಲಾಗಿದ್ದರೂ, ಸರ್ಕಾರ, ಗೃಹ ಇಲಾಖೆ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳದೆ ತರಾತುರಿಯಲ್ಲಿ ಇಂದೇ ಮಾಡುವ ಉದ್ದೇಶ ಏನಿತ್ತು ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande