ಬಳ್ಳಾರಿ, 4 ಜೂನ್ (ಹಿ.ಸ.)
ಆ್ಯಂಕರ್: ಸಮಾಜದಲ್ಲಿರುವ ಎಲ್ಲಾ ವರ್ಗದಲ್ಲಿರುವ ಭಕ್ತ ಸಮೂಹದ ಶ್ರೇಯಸ್ಸಿಗೆ ತಮ್ಮ ತಪಸ್ಸಿನ ಶಕ್ತಿಯನ್ನು ಆಶೀರ್ವಾದ ರೂಪದಲ್ಲಿ ವಿನಿಯೋಗಿಸಿದವರು ನಂದೀಪುರದ ಚರಂತಪ್ಪಜ್ಜನವರು ಎಂದು ಕೊಟ್ಟೂರಿನ ಚಾನಕೋಟಿ ಮಠದ ಡಾ. ಸಿದ್ದಲಿಂಗ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸವಭವನದಲ್ಲಿ ಬುಧವಾರ ನಡೆದ ಗದ್ದಿಕೇರಿ ಕ್ಷೇತ್ರದ ನಂದೀಪುರ ಮಠದ ಗುರು ಚರಂತಪ್ಪಜ್ಜ ಶ್ರೀಗಳ 21ನೇ ಪುಣ್ಯ ಸ್ಮರಣೆಯಲ್ಲಿ ಸಲ್ಲಿಸಿದ ಅವರು, ಚರಂತಪ್ಪಜ್ಜನವರು ಸೀಮಾತೀತರು. ಲೋಕ ಪೂಜಿತರು. ಇಬ್ಬರು ಮಡದಿಯರು, 21 ಮಕ್ಕಳು, ಸದಾಕಾಲ ಟೀ - ಸಿಗರೇಟ್ನಿಂದ ಜೀವನ ನಡೆಸಿ ಭಕ್ತ ಸಮೂಹದ ಆರಾಧ್ಯದೈವವಾದರು. ಚರಂತಪ್ಪಜ್ಜನವರ ಶಕ್ತಿಯು ಹತಾಶೆಗೊಂಡಿದ್ದ ಜನರಿಗೆ ಆನಂದವನ್ನು ಮೂಡಿಸಿತ್ತು ಎಂದರು.
ಕಷ್ಟವೆಂದು ಚರಂತಪಪ್ಪಜ್ಜನವರಲ್ಲಿ ಬಂದವರೆಲ್ಲೂ ಸುಖವನ್ನು ಅನುಭವಿಸಿದ್ದಾರೆ. ನಷ್ಟವೆಂದು ಬಂದವರು ಲಾಭ ಪಡೆದಿದ್ದಾರೆ. ನೋವುಂಡವರು ನಲಿವು ಆನಂದಿಸಿದ್ದಾರೆ. ಭಕ್ತರ ಮನದಿಚ್ಛೆಯನ್ನು ಸಾಕಾರಗೊಳಿಸಿದ ದೈವೀ ವ್ಯಕ್ತಿ ಅವರು. ಚರಂತಪ್ಪಜ್ಜನವರ ಮಾರ್ಗದರ್ಶನದಲ್ಲಿ ಸಮಾಜಮುಖಿಯಾಗಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಾ. ಮಹೇಶ್ವರ ಸ್ವಾಮೀಜಿ ಅವರು ಕೃಷಿ, ಕೆರೆ ತುಂಬಿಸುವಿಕೆ, ಮೀನುಗಾರಿಕೆ, ಜೇನುಕೃಷಿ, ಸಾವಯವ, ಅಕ್ಷರ - ಅನ್ನ ಮತ್ತು ಆಶ್ರಯ ಕಲ್ಪಿಸುವ ಮೂಲಕ ಅನೇಕರ ಬೆಳಕಾಗಿ ಬೆಳಗುತ್ತಿದ್ದಾರೆ ಎಂದರು.
ಉಜ್ಜಯನಿ ಜಗದ್ಗುರು ಪೀಠದ ಶ್ರೀಗಳು ಗದ್ದಿಗೇರಿ ಕ್ಷೇತ್ರದ ನಂದೀಪುರ ಮಠದ ಗುರು ಚರಂತಪ್ಪಜ್ಜ ಶ್ರೀಗಳ 21ನೇ ಪುಣ್ಯ ಸ್ಮರಣೆಯನ್ನು ಉದ್ಘಾಟಿಸಿ, ಆಶೀರ್ವದಿಸಿ, ಕಾಯಕ ಮತ್ತು ಕಾಯವನ್ನು ವಿಭಜಿಸಿ, ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ತಪ್ಪಸ್ಸನ್ನು ಒಗ್ಗೂಡಿಸಿ ದೈವೀಸಂಪನ್ನರಾಗಿದ್ದ ಚರಂತಪ್ಪಜ್ಜನವರು ಸಂಸಾರಿಕರಾಗಿಯೇ ಸನ್ಯಾಸಿಯಾಗಿ ಭಕ್ತರನ್ನು ಒಗ್ಗೂಡಿಸಿ - ಸಂರಕ್ಷಿಸಿದವರು. ನಮ್ಮ ನಾಡಿನಲ್ಲಿ ಸಿಗುವ ಅನೇಕ ಪವಾಡಪುರುಷರಲ್ಲಿ ಚರಂತಪ್ಪಜ್ಜನವರು ವಿಶಿಷ್ಟರು ಎಂದರು.
ಚರಂತಪ್ಪಜ್ಜನವರ ಗದ್ದಿಕೇರಿ ಮಠದ ಪೀಠಾಧಿಪತಿಗಳಾಗಿರುವ ಡಾ. ಮಹೇಶ್ವರ ಸ್ವಾಮೀಜಿಗಳು, ಜನಸೇವೆ, ಧರ್ಮಸೇವೆ, ಶಿಕ್ಷಣ ಸೇವೆ, ಕೃಷಿ, ಹೀಗೇ ಸಮಾಜಮುಖಿಯಾಗಿ ತಮ್ಮನ್ನು ತಾವು, ಸಮಾಜಕ್ಕೆ ಸಮರ್ಪಿಸಿಕೊಂಡು ಧರ್ಮದ ಜೊತೆಯಲ್ಲಿಯೇ, ಆಧ್ಯಾತ್ಮದ ಜೊತೆಯಲ್ಲಿಯೇ ವಿಶಿಷ್ಟ ಸಾಧನೆಗೆ ಮುಂದಾಗಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಎನ್. ತಿಪ್ಪಣ್ಣ, ಅಲ್ಲಂ ವೀರಭದ್ರಪ್ಪ, ಬಾಣಾಪುರ ಶಿವರಾಮರೆಡ್ಡಿ, ಜೆ.ಎಂ. ಪಂಪಯ್ಯಶಾಸ್ತಿಗಳು, ಓ.ಎಂ. ಚನ್ನಬಸಯ್ಯ, ಮೆಟ್ರಿ ಮೃತ್ಯುಂಜಯ, ಚೊಕ್ಕ ಬಸವನಗೌಡ, ಆನೆಗಂಗಣ್ಣ, ಅರ್ವಿ ಬಸವನಗೌಡ, ಕುಪ್ಪಗಲ್ಲು ಅಯ್ಯಪ್ಪ ಮತ್ತು ಚೋರನೂರು ಕೊಟ್ರಪ್ಪ ಅವರಿಗೆ `ಚರಂತಾರ್ಯ' ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.
ಸಾಂಸ್ಕøತಿಕ ಮೆರವಣಿಗೆ
ನಗರದ ಶ್ರೀಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಶ್ರೀಗಳ ಭಾವಚಿತ್ರದ ಸಾಂಸ್ಕøತಿಕ ಶೋಭಾಯಾತ್ರೆ ಶ್ರದ್ಧೆ ಭಕ್ತಿಯಿಂದ ಭಕ್ತರ ಸಮ್ಮುಖದಲ್ಲಿ ನೆರವೇರಿತು. ನಂದೀಪುರ ಗದ್ದಿಕೇರಿ ಮಠದ ಡಾ. ಮಹೇಶ್ವರ ಸ್ವಾಮಿ, ಕಲ್ಯಾಣ ಮಠದ ಶ್ರೀಗಳು ಸೇರಿ ವಿವಿಧ ಮಠಾಧೀಶ್ವರರು ಭಕ್ತರೊಂದಿಗೆ ಡೊಳ್ಳು ಭಾರಿಸುವ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.
ಶ್ರೀ ಚರಂತಪ್ಪಜ್ಜ, ಗುರು ರೇಣುಕಾಚಾರ್ಯರ, ಬಸವೇಶ್ವರರ ಭಾವಚಿತ್ರ ಮತ್ತು ಉಜ್ಜಯಿರಿ ಜಗದ್ಗುರು ಪೀಠದ ಶ್ರೀಗಳನ್ನು ಸಾರೋಟದಲ್ಲಿ ಮೆರವಣಿಗೆ ಮೂಲಕ ಪೂರ್ಣಕುಂಭ ಕಳಸದೊಂದಿಗೆ ಬಸವಭವನದಕ್ಕೆ ಆಹ್ವಾನಿಸಲಾಯಿತು.
ಬಸವಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಸಾವಯವ ಮತ್ತು ಗಿಡಮೂಲಿಕೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಲೇಖಕ ಎಸ್.ವಿ. ಪಾಟೀಲ್ ಗುಂಡೂರ ಅವರು ಬರೆದಿರುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿಚ್ಚುಗಲ್ ಪಂಚಾಕ್ಷರಪ್ಪ ಅವರು ಸ್ವಾಗತ ಕೋರಿದರು.
ಸಿದ್ದರಾಮ ಕಲ್ಮಠ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಪುಣ್ಯಸ್ಮರಣೋತ್ಸವದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್