ಜೂ.06 ರಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ
ಬಳ್ಳಾರಿ, 4 ಜೂನ್ (ಹಿ.ಸ.) ಆ್ಯಂಕರ್: ನಗರದ ತೇರುಬೀದಿಯಲ್ಲಿ ಶ್ವೇತಾಂಬರ ಜೈನ ಸಮುದಾಯದ ದಾನಿಗಳಿಂದ ಸ್ಥಾಪನೆಗೊಂಡ ದಕ್ಷಿಣ ಭಾರತದ ಮೊದಲ ಮೂರು ಗೋಪುರಗಳುಳ್ಳ (ಶ್ರೀ ಶಿಖರ) ಪುರುಷದಾನಿಯ ಪಾಶ್ರ್ವನಾಥ ಜೈನ ಶ್ವೇತಾಂಬರ್ ಮಂದಿರದ ಶತಮಾನೋತ್ಸವದ ಸಂಭ್ರಮದ ನಿಮಿತ್ತ ಭಾರತೀಯ ಅಂಚೆ ಇಲಾಖೆಯು ಈ ಅವಿಸ್ಮರಣೀಯ
ಜೂ.06 ರಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ


ಬಳ್ಳಾರಿ, 4 ಜೂನ್ (ಹಿ.ಸ.)

ಆ್ಯಂಕರ್: ನಗರದ ತೇರುಬೀದಿಯಲ್ಲಿ ಶ್ವೇತಾಂಬರ ಜೈನ ಸಮುದಾಯದ ದಾನಿಗಳಿಂದ ಸ್ಥಾಪನೆಗೊಂಡ ದಕ್ಷಿಣ ಭಾರತದ ಮೊದಲ ಮೂರು ಗೋಪುರಗಳುಳ್ಳ (ಶ್ರೀ ಶಿಖರ) ಪುರುಷದಾನಿಯ ಪಾಶ್ರ್ವನಾಥ ಜೈನ ಶ್ವೇತಾಂಬರ್ ಮಂದಿರದ ಶತಮಾನೋತ್ಸವದ ಸಂಭ್ರಮದ ನಿಮಿತ್ತ ಭಾರತೀಯ ಅಂಚೆ ಇಲಾಖೆಯು ಈ ಅವಿಸ್ಮರಣೀಯ ಮೈಲಿಗಳನ್ನು ಸಾಕ್ಷೀಕರಿಸಿ ಬಳ್ಳಾರಿ ಅಂಚೆ ಕಚೇರಿ ವಿಭಾಗದ ವತಿಯಿಂದ ಜೂ.06 ರಂದು ಬೆಳಿಗ್ಗೆ 10.30 ಗಂಟೆಗೆ ಬಳ್ಳಾರಿ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿವಿಧ ಗಣ್ಯರು ಭಾಗವಹಿಸಲಿದ್ದು, ಸಾರ್ವಜನಿಕರು, ಅಂಚೆ ಚೀಟಿ ಸಂಗ್ರಹಕರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬಳ್ಳಾರಿ ಅಂಚೆ ವಿಭಾಗದ ಅಧೀಕ್ಷಕ ಪಿ.ಚಿದಾನಂದ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande