ನಾಳೆ ಮಹಾನಗರ ಪಾಲಿಕೆಯಿಂದ ಸಸಿ ನೆಡುವ ಕಾರ್ಯಕ್ರಮ
ರಾಯಚೂರು, 4 ಜೂನ್ (ಹಿ.ಸ.) ಆ್ಯಂಕರ್: ರಾಯಚೂರು ಮಹಾನಗರ ಪಾಲಿಕೆಯು ಜಿಲ್ಲಾಡಳಿತ, ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ರಾಯಚೂರು ಮಹಾನಗರದಾದ್ಯಂತ ಸಸಿ ನೆಡುವ ಮೂಲಕ ರಾಯಚೂರು ಹಸಿರು ಕ್ರಾಂತಿ ಕಾರ್ಯಕ್ರಮವನ್ನು ಜೂನ್ 05ರಂದು ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ
ನಾಳೆ ಮಹಾನಗರ ಪಾಲಿಕೆಯಿಂದ ಸಸಿ ನೆಡುವ ಕಾರ್ಯಕ್ರಮ


ರಾಯಚೂರು, 4 ಜೂನ್ (ಹಿ.ಸ.)

ಆ್ಯಂಕರ್: ರಾಯಚೂರು ಮಹಾನಗರ ಪಾಲಿಕೆಯು ಜಿಲ್ಲಾಡಳಿತ, ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ರಾಯಚೂರು ಮಹಾನಗರದಾದ್ಯಂತ ಸಸಿ ನೆಡುವ ಮೂಲಕ ರಾಯಚೂರು ಹಸಿರು ಕ್ರಾಂತಿ ಕಾರ್ಯಕ್ರಮವನ್ನು ಜೂನ್ 05ರಂದು ಹಮ್ಮಿಕೊಂಡಿದೆ.

ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಘನ ಉಪಸ್ಥಿತಿ ವಹಿಸುವರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande