ಭಯೋತ್ಪಾದನೆ ಬೆಂಬಲಿತ ಬೇಹುಗಾರಿಕೆ ಜಾಲ ಭೇದಿಸಿದ ಪಂಜಾಬ್ ಪೋಲಿಸ್
ಮೊಹಾಲಿ, 04 ಜೂನ್ (ಹಿ.ಸ.) : ಆ್ಯಂಕರ್ : ಪಂಜಾಬ್ ಪೊಲೀಸ್‌ರ ವಿಶೇಷ ಕಾರ್ಯಾಚರಣೆ ಪಡೆ ಮೊಹಾಲಿಯಲ್ಲಿ ಕಾರ್ಯಾಚರಣೆ ನಡೆಸಿ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಅಂತಾರಾಷ್ಟ್ರೀಯ ಬೇಹುಗಾರಿಕೆ ಜಾಲವನ್ನು ಪತ್ತೆಹಚ್ಚಿದೆಯೆಂದು ರಾಜ್ಯ ಪಂಜಾಬ್ ಪೋಲಿಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ. ಜಸ್ಬೀರ್ ಸಿಂಗ್
ಭಯೋತ್ಪಾದನೆ ಬೆಂಬಲಿತ ಬೇಹುಗಾರಿಕೆ ಜಾಲ ಭೇದಿಸಿದ ಪಂಜಾಬ್ ಪೋಲಿಸ್


ಮೊಹಾಲಿ, 04 ಜೂನ್ (ಹಿ.ಸ.) :

ಆ್ಯಂಕರ್ : ಪಂಜಾಬ್ ಪೊಲೀಸ್‌ರ ವಿಶೇಷ ಕಾರ್ಯಾಚರಣೆ ಪಡೆ ಮೊಹಾಲಿಯಲ್ಲಿ ಕಾರ್ಯಾಚರಣೆ ನಡೆಸಿ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಅಂತಾರಾಷ್ಟ್ರೀಯ ಬೇಹುಗಾರಿಕೆ ಜಾಲವನ್ನು ಪತ್ತೆಹಚ್ಚಿದೆಯೆಂದು ರಾಜ್ಯ ಪಂಜಾಬ್ ಪೋಲಿಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.

ಜಸ್ಬೀರ್ ಸಿಂಗ್, ರೂಪನಗರ ಜಿಲ್ಲೆಯ ಮಹ್ಲಾನ್ ಗ್ರಾಮದ ನಿವಾಸಿ, ತನ್ನ ಜಾನ್ ಮಹಲ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ. ತನಿಖೆಯ ವೇಳೆ, ಜಸ್ಬೀರ್ ಪಿಐಓ ಶಕೀರ್ ಅಲಿಯಾಸ್ ಜುಟ್ ರಾಂಧವಾ, ಈಗಾಗಲೇ ಬಂಧನದಲ್ಲಿರುವ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಮತ್ತು ಪಾಕಿಸ್ತಾನಿ ಹೈಕಮಿಷನ್‌ನ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಎಂಬವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಕಂಡುಬಂದಿದೆ.

ಜಸ್ಬೀರ್, ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಡ್ಯಾನಿಶ್‌ನ ಆಹ್ವಾನದ ಮೇರೆಗೆ ದೆಹಲಿಯಲ್ಲಿ ಭಾಗವಹಿಸಿದ್ದ. ಅಲ್ಲಿ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಮತ್ತು ವ್ಲಾಗರ್‌ರೊಂದಿಗೆ ಭೇಟಿಯಾಗಿರುವುದು ಧೃಡಪಟ್ಟಿದೆ. ಆತನು 2020, 2021 ಮತ್ತು 2024ರಲ್ಲಿ ಪಾಕಿಸ್ತಾನಕ್ಕೆ ಮೂರು ಬಾರಿ ಪ್ರಯಾಣ ಮಾಡಿದ್ದು ತನಿಖೆಯಲ್ಲಿ ಅವನ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಪಾಕಿಸ್ತಾನ ಮೂಲದ ಸಂಖ್ಯೆಗಳ ಸಕ್ರಿಯ ಸಂಪರ್ಕ ಪತ್ತೆಹಚ್ಚಿದ್ದಾರೆ. ಈ ಸಾಧನಗಳು ಈಗ ವಿಧಿವಿಜ್ಞಾನ ತಪಾಸಣೆಯಲ್ಲಿವೆ.

ಜ್ಯೋತಿ ಮಲ್ಹೋತ್ರಾ ಬಂಧನದ ಬಳಿಕ, ಜಸ್ಬೀರ್ ತನಗೆ ಪಿಐಒಗಳೊಂದಿಗೆ ಇದ್ದ ಸಂವಹನದ ಕುರುಹುಗಳನ್ನು ಅಳಿಸಲು ಯತ್ನಿಸಿರುವುದು ಪತ್ತೆಯಾಗಿದೆ.

ಈ ಕುರಿತು ಮೊಹಾಲಿಯ ಎಸ್‌ಎಸ್‌ಒಸಿ ಕೇಂದ್ರದಲ್ಲಿ ಜಸ್ಬೀರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ ಎಂದು‌ ಡಿಜಿಪಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande