ರಾಯ್ಪುರ್, 04 ಜೂನ್ (ಹಿ.ಸ.) :
ಆ್ಯಂಕರ್ : ಛತ್ತಿಸಗಢದ ರಾಯ್ಪುರದ ಭಟಗಾಂವ್ನಲ್ಲಿ ಇತಿಹಾಸಕಾರ ರೋಹಿತ್ ತೋಮರ್ ಮತ್ತು ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ತೋಮರ್ ಮನೆಗಳ ಮೇಲೆ ಅಪರಾಧ ವಿಭಾಗದ 25 ಸದಸ್ಯರ ತಂಡ ಮಂಗಳವಾರ ರಾತ್ರಿ ದಾಳಿ ನಡೆಸಿದೆ.
ಇಬ್ಬರೂ ಸಹೋದರರು ದಾಳಿ ಮೊದಲು ಪರಾರಿಯಾಗಿದ್ದಾರೆ. ದಾಳಿಯಲ್ಲಿ ಕೋಟ್ಯಂತರ ನಗದು, 2 ಕೆಜಿ ಚಿನ್ನ, 2 ಪಿಸ್ತೂಲು, 20 ಕಾರ್ಟ್ರಿಡ್ಜು, ಥಾರ್ ಹಾಗೂ ಬಿಎಂಡಬ್ಲ್ಯು ಕಾರು ಮತ್ತು ಭೂಮಿ ದಾಖಲೆಗಳು ವಶಕ್ಕೆ ಪಡೆಯಲಾಗಿದೆ.
15 ಗಂಟೆಗಳ ಕಾರ್ಯಾಚರಣೆಯಲ್ಲಿ ಡಿಜಿಟಲ್ ಪುರಾವೆಯನ್ನೂ ವಶಪಡಿಸಿಕೊಳ್ಳಲಾಗಿದೆ. ಹಲವಾರು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿಯೇ ಈ ದಾಳಿ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa