ಕಲಬುರಗಿ, 4 ಜೂನ್ (ಹಿ.ಸ.):
ಆ್ಯಂಕರ್:ಜೂನ್ 05 ಗುರುವಾರದಿಂದ ಕಲಬುರಗಿ ಮಹಾನಗರದ ಶ್ರೀ ಶರಣಬಸವೇಶ್ವರ ಜಾತ್ರಾಮೈದಾನದಲ್ಲಿ ಸ್ಥಾಪಿಸಲಾದ ರಂಗಮಂದಿರದಲ್ಲಿ ದಿವಂಗತ ಮಹೇಶ ಕಲ್ಲೋಳ ವಿರಚಿತ ಗಂಡನಿಗೆ ತಕ್ಕ ಹೆಂಡತಿ ಎಂಬ ಸುಂದರ ಸಾಮಾಜಿಕ ಹಾಸ್ಯ ನಾಟಕವನ್ನು ಪ್ರಾರಂಭಿಸಲಿದ್ದೇವೆ ಎಂದು ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿಯ ಮುಖಂಡರು ತಿಳಿಸಿದರು.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ (ರಿ), ಕಮತಗಿಯ ಪಾಪು ಕಲ್ಲೂರ್ ಹಾಗೂ ಕಲಾವಿದೆ ಕನಕಲಕ್ಷ್ಮೀ ಕಲ್ಲೂರ್ ಅವರು, ಹೊಳೆ ಹುಚ್ಚೇಶ್ವರ ನಾಟ್ಯ ಸಂಘ
ನಾಟಕ ಸಂಸ್ಥೆಯು 30 ವರ್ಷಗಳ ನಂತರ ಕಲಬುರಗಿ ಮಹಾನಗರಕ್ಕೆ ಆಗಮಿಸಿದ್ದು, ಕಲಬುರಗಿ ಹಾಗೂ ಸುತ್ತಮುತ್ತಲಿನ ಕಲಾಭಿಮಾನಿಗಳು ನಾಟಕ ವಿಕ್ಷಣೆ ಮಾಡುವಂತೆ ಮನವಿ ಮಾಡಿದರು. ನಮ್ಮ ಸಂಸ್ಥೆಯ ಅತೀ ಪ್ರಮುಖವಾದ ಗಂಡನಿಗೆ ತಕ್ಕ ಹೆಂಡತಿ ನಾಟಕವು ರಾಜ್ಯಾದ್ಯಂತ ಸಾವಿರಾರು ಪ್ರದರ್ಶನ ಕಂಡು ಎಲ್ಲರ ಜನಮನ ಗೆದ್ದಿದೆ.. ಮೇಲಾಗಿ ಅತಿಹೆಚ್ಚು ಮಹಿಳೆಯರು ಕುಟುಂಬ ಸಮೇತರಾಗಿ ವೀಕ್ಷಿಸುವ ನಾಟಕ ಇದಾಗಿದೆ. ನಮ್ಮ ಸಂಸ್ಥೆಯಿಂದ ಪ್ರದರ್ಶನಗೊಳ್ಳುವ ಪ್ರತಿಯೊಂದು ನಾಟಕವು ಕೂಡ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ನಾಟಕವಾಗಿದ್ದು, ನಾಟಕದಲ್ಲಿ ಯಾವುದೇ ರೀತಿಯ ಅಶ್ಲೀಲ್ ಸಂಭಾಷಣೆ, ಅಶ್ಲೀಲ ನೃತ್ಯ ಇರುವದಿಲ್ಲ. ಸಂಸಾರ ಸಮೇತರಾಗಿ ಮೂರು ಗಂಟೆಗಳ ಕಾಲ ನಾಟಕ ವೀಕ್ಷಣೆ ಮಾಡುವ ನಾಟಕ ಇದಾಗಿದೆ. ರಾಜ್ಯದ ಎಲ್ಲ ಭಾಗದ ಕಲಾವಿದರೂ ಸಹ ಈ ಸಂಸ್ಥೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂಸ್ಥೆಯು ಸುಮಾರು 50 ವರ್ಷ ಇತಿಹಾಸವುಳ್ಳ ಸಂಸ್ಥೆಯಾಗಿದ್ದು, ಮಧ್ಯದಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಮತ್ತೆ ಈ ನಾಟಕ ಸಂಸ್ಥೆಯನ್ನು ಪುನರ್ ಪ್ರಾರಂಭಿಸಿ ಸುಮಾರು 05 ವರ್ಷಗಳಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನ ನೀಡುತ್ತಿದೆ. ಮಹಾಲಿಂಗಪುರ, ಹುಬ್ಬಳ್ಳಿ, ಕುಮಟಾ, ಗೋಕಾಕ, ಬೆಳಗಾವಿ, ಶಿರಸಿ, ಬೆಂಗಳೂರು ಹೀಗೆ ರಾಜ್ಯದ ಮೂಲೆಮೂಲೆಗಳಲ್ಲೂ ಕೂಡಾ ನಾಟಕ ಪ್ರದರ್ಶನ ನೀಡಿ ಯಶಸ್ವಿ ಕಂಡಿದೆ. ಸಧ್ಯ 30 ವರ್ಷಗಳ ನಂತರ ಕಲಬುರಗಿಗೆ ಆಗಮಿಸಿದ ಸಂಸ್ಥೆಯು 6 ತಿಂಗಳುಗಳ ಕಾಲ ಹಲವಾರು ಹೊಸಹೊಸ ನಾಟಕ ಪ್ರದರ್ಶನ ನೀಡಬೇಕೆಂದು ಸಂಕಲ್ಪ ಮಾಡಿಕೊಂಡಿದೆ. ಕಾರಣ ಕಲಬುರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಕಲಾಭಿಮಾನಿಗಳು ನಾಟಕ ವೀಕ್ಷಣೆ ಮಾಡಿ ನಶಿಸಿ ಹೋಗುತ್ತಿರುವ ವೃತ್ತಿ ರಂಗಭೂಮಿಯ ಕಲೆ-ಕಲಾವಿದರನ್ನು ಉಳಿಸಿ ಬೆಳಸಬೇಕಾಗಿ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ರಿಯಾಜ್ ಕರ್ಜಗಿ, ಮೇಘರಾಜ್ ಜಾಲಿಹಾಳ, ಸಂಕೇತ ಮಂಗಳೂರು, ಆನಂದ ಪತ್ತಾರ, ಸೇರಿದಂತೆ ಅನೇಕರು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Samarth biral