ಭತ್ತದ ರಾಶಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ; ಅನ್ನದಾಸೋಹಕ್ಕೆ ನೂರು ಕ್ವಿಂಟಾಲ್ ಭತ್ತ ದೇಣಿಗೆ
ಭತ್ತದ ರಾಶಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ; ಅನ್ನದಾಸೋಹಕ್ಕೆ ನೂರು ಕ್ವಿಂಟಾಲ್ ಭತ್ತ ದೇಣಿಗೆ
ಮುಳಬಾಗಿಲು ತಾಲೂಕಿನ ಅವನಿ ಹೋಬಳಿ ಪಿಚ್ಚಗುಂಟ್ಲಹಳ್ಳಿ ಗ್ರಾಮದ ಶ್ರೀ ಆದಿಪರಾಶಕ್ತಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಮತ್ತು ಭಾರತೀಯ ಕಿಸಾನ್ ಸಂಘ ಸಹಯೋಗದಲ್ಲಿ ಮಂಗಳವಾರ ಭತ್ತದ ರಾಶಿ ಪೂಜೆ, ಭೂಮಿ ( ಮಣ್ಣು) ನ ಪೂಜೆಯನ್ನು ಶ್ರೀ ಆದಿಪರ ಶಕ್ತಿ ದೇವಾಲಯದ ತಿಮ್ಮಪ್ಪ ಸ್ವಾಮಿ ನೇತೃತ್ವದಲ್ಲಿ ನೆರವೇರಿಸಲಾಯಿತು.


ಕೋಲಾರ, ಜೂನ್ ೪ (ಹಿ.ಸ) :

ಆ್ಯಂಕರ್ : ಕೃಷಿ ಸಂಸ್ಕೃತಿ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಉತ್ತುಂಗ ಸ್ಥಾನದಲ್ಲಿ ಇತ್ತು ಇಂತಹ ಮಹತ್ವದ ಮುಂಚೂಣಿಯಲ್ಲಿ ಇದ್ದ ವ್ಯವಸಾಯದ ಸಂಪ್ರದಾಯಗಳು ದೇಶದ ಮೇಲೆ ನಡೆದ ಪರಕೀಯರ ಅಕ್ರಮಣ, ಅವರು ಹೇರಿದ ವಿದೇಶಿ ಕಲ್ಚರ್ ಪ್ರಭಾವದಿಂದ ಮನುಷ್ಯರಷ್ಟೇ ಅಲ್ಲ ನಮ್ಮ ನೆಲ ಜಲ ಸೇರಿದಂತೆ ಪ್ರಕೃತಿ ವಿಕೃತಿಯಾಗುತ್ತಿದೆ ಎಂದು ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠಾಧಿಪತಿ ತಿಮ್ಮಪ್ಪ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ಮುಳಬಾಗಿಲು ತಾಲೂಕಿನ ಅವಣಿ ಹೋಬಳಿ ಪಿಚ್ಚಗುಂಡ್ಲಹಳ್ಳಿ ಗ್ರಾಮದ ಬಂಡೆಯ ಮೇಲೆ ಭಾರತೀಯ ಕಿಸಾನ್ ಸಂಘ ಸಹಯೋಗದಲ್ಲಿ ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಭೂಮಿ (ಮಣ್ಣು) ಪೂಜೆ, ಭತ್ತದ ರಾಶಿ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿ ವಿದೇಶಿ ಆಡಳಿತಗಾರರ ಅಕ್ರಮಣದಿಂದ ನಮ್ಮ ಪೂರ್ವಿಕರು ಮಾಡಿಕೊಂಡು ಬರುತ್ತಿದ್ದ ಕೃಷಿ ಪದ್ಧತಿಗಳು, ಪರಂಪರೆಗಳು ಕಣ್ಮರೆ ಯಾಗುತ್ತಿರುವ ಕಾರಣ ಈ ನೆಲದ ಧಾರ್ಮಿಕ ತಳಹದಿಗೂ ಧಕ್ಕೆಯಾಗಿ ಪರಸ್ಪರ ಸೋದರತ ಭಾವನೆಗಳು ಮರೆಯಾಗುತ್ತಿವೆ ಎಂದರು.

ಮುಂಗಾರು ಕೃಷಿ ಆರಂಭದಲ್ಲಿ ಹೊಲದಲ್ಲಿ ನೇಗಿ ಲುಕಟ್ಟಿ ಭೂಮಿ ಪೂಜೆ ನೆರವೇರಿಸಿ ಎತ್ತುಗಳಿಗೆ ಪೂಜೆ ಸಲ್ಲಿಸಿ ಗೋಗ್ರಾಸ ನೀಡಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿತ್ತು, ಗೋವುಗಳಗೊಬ್ಬರ, ಗಿಡಮರಗಳ ಎಲೆಗಳನ್ನು ಭೂಮಿಗೆ ಹಾಕಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಉತ್ಕೃಷ್ಟ ಆಹಾರ ಪದಾರ್ಥಗಳನ್ನು ರೈತರು ಬೆಳೆದು ಸಮಾಜಕ್ಕೆ ಅನ್ನದಾತರಾಗಿದ್ದರು, ಭಾರತೀಯ ಕೃಷಿಯ ಸಂಸ್ಕೃತಿ ರಾಮಾಯಣ ಮಹಾಭಾರತ ಕಾಲದಿಂದಲೂ ಬಂದಿದೆ, ಭರತ ಮಹಾರಾಜರು ಕೃಷಿಯನ್ನು ಮಾಡುತ್ತಿದ್ದರು, ಮಹಾಭಾರತದ ಕಾಲದಲ್ಲಿ ಕೃಷಿಯನ್ನು ವೈಜ್ಞಾನಿಕವಾಗಿ ಯಾವ ರೀತಿ ಮಾಡಬೇಕು ಎಂಬುದು ಭಗವನ್ ಬಲರಾಮ ನೇಗಿಲನ್ನು, ಒನಕೆಯನ್ನು ಹಿಡಿದು ಕೃಷಿ ಮತ್ತು ಕೃಷಿ ಉತ್ಪನ್ನಗಳಿಗೆ ಸಂಸ್ಕಾರ ನೀಡುವುದನ್ನು ಯಾವ ರೀತಿ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟರು, ರೈತ ಬೆಳೆ ಮಾಡುವ ಮೊದಲು ಪ್ರಕೃತಿ, ಆಕಾಶ, ಭೂಮಾತೇ , ಗಂಗಾಮಾತೇ ,ಗೋಮಾತೇ ಪೂಜೆ ಮಾಡುವ ಮೂಲಕ ಕಾರ್ಯನಿರ್ವಹಿಸಿ ಉತ್ತಮ ಪರಿಸರವನ್ನು ಸಮಾಜಕ್ಕೆ ನೀಡಿದ್ದರು ಇದನ್ನು ನಮ್ಮ ಪೂರ್ವಿಕರು ಅನುಸರಣೆ ಮಾಡಿಕೊಂಡು ಬರುವ ಮೂಲಕ ಪರಿಸರಸಂರಕ್ಷರಾಗಿದ್ದರು ಎಂಬ ಮಾಹಿತಿ ನೀಡಿದರು.

ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ. ಅಪ್ಪಾಜಿಗೌಡ ಮಾತನಾಡಿ ಸ್ಪರ್ಧಾತ್ಮಕ ಯುಗದ ಪೈಪೋಟಿ ಪ್ರಪಂಚದಲ್ಲಿ ಮುಂದಿನ ದುಷ್ಪರಿಣಾಮಗಳ ಬಗ್ಗೆ ಚಿಂತಿಸದೆ ಕೃಷಿಯನ್ನು ವೈಜ್ಞಾನಿಕವಾಗಿಸುವ ಬರದಲ್ಲಿ ಭೂಮಿಗೆ ಹೆಚ್ಚಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಭೂಮಿಯನ್ನು ಬರಡು ಮಾಡುತ್ತಿದ್ದೇವೆ ಜೊತೆಗೆ ಮನುಕುಲಕ್ಕೆ ಮಾರಕವಾದಂತ ಕೀಟನಾಶಕಗಳನ್ನು ಅವೈಜ್ಞಾನಿಕವಾಗಿ ಬಳಸುತ್ತಿರುವುದರಿಂದ ಭೂಮಿ ನೀರು ಕಲಿಷಿತವಾಗಿ ಜನರು ವಿಷಮುಕ್ತ ಆಹಾರ ಸೇವನೆ ಮಾಡಲು ಸಾಧ್ಯವಾಗುತ್ತಿಲ್ಲ, ಇದರಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಈ ಬಗ್ಗೆ ಜಾಗೃತಿ ವಹಿಸಿ ಸಮಾಜವನ್ನು ಎಚ್ಚರಿಸುವ ಕೆಲಸ ಆಗಬೇಕಾಗಿದೆ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬರಡು ಭೂಮಿ ಮಾಡಿದರೆ ನೈಸರ್ಗಿಕ ಮತ್ತು ಸಾವಯುವ ಕೃಷಿ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಕೃಷಿಕರು ಸೇರಿದಂತೆ ಇಡೀ ಸಮಾಜದ ಆರೋಗ್ಯವನ್ನು ಕಾಪಾಡಲು ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ಬಿಕೆಎಸ್ ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ.ಜಯಪ್ಪ ಮಾತನಾಡಿ ಭಾರತೀಯ ಕಿಸಾನ್ ಸಂಘ ೧೯೭೯ ರಿಂದ ದೇಶದ ಎಲ್ಲಾ ಕಡೆ ರೈತ ಕ್ಷೇತ್ರದಲ್ಲಿ ರೈತರಿಂದ, ರೈತರಿಗಾಗಿ , ರೈತರಗೋಸ್ಕರ ಕಾರ್ಯ ನಿರ್ವಹಿಸುತ್ತಿರುವ ದೇಶದ ಅತಿ ದೊಡ್ಡ ರೈತ ಸಂಘಟನೆಯಾಗಿದ್ದು ಸಾವಯವ ಕೃಷಿ, ಗೋ ಸಂರಕ್ಷಣೆ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಮಾಡುತ್ತಾ ವಿಷಮುಕ್ತ ಆಹಾರ ಒದಗಿಸುವ ಜವಾಬ್ದಾರಿಯನ್ನು ರೈತರಲ್ಲಿ ಜಾಗೃತಿ ಗೊಳಿಸುತ್ತಾ ರೈತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಲು ಪೆರೇಪಣೆ ನೀಡುತ್ತಾ ಬಂದಿದೆ, ಜೊತೆಗೆ ಉದ್ಯೋಗಾಧಾರಿತ ಗ್ರಾಮ, ಆರೋಗ್ಯಯುತ ಜೀವನ ಎಂಬ ದ್ಯೆಯೋದ್ದೇಶಗಳೊಂದಿಗೆ ಕಾರ್ಯನಿರ್ವಹಿಸಿಕೊಂಡು ಬರಲಾಗುತ್ತಿದೆ ಎಂದರು.

ಅವಣಿ ಹೋಬಳಿ ತೋಟಗಾರಿಕೆ ಅಧಿಕಾರಿ ಮುರುಗೇಶ್ ಮಾತನಾಡಿ ಭತ್ತದ ರಾಶಿ ಪೂಜೆ, ಭೂಮಿ ( ಮಣ್ಣು) ನ ಪೂಜೆಯನ್ನು ಮಾಡುತ್ತಾರೆ ಎಂಬದನ್ನು ಕಣ್ಣಾರೆಕಂಡಿದ್ದು ನಮ್ಮ ಪೂರ್ವಿಕರ ಕೃಷಿ ಸಂಪ್ರದಾಯ ಬಗ್ಗೆ ಮಹತ್ವದ ಮಾಹಿತಿ ಎಷ್ಟೊಂದು ಅರ್ಥಪೂರ್ಣವಾಗಿದೆ ಎಂದರು.

ಶ್ರೀ ಆದಿಪರಾಶಕ್ತಿ ದೇವಾಲಯದ ಅನ್ನದಾನಕ್ಕೆ ಹೊಸಕೆರೆ ಗ್ರಾಮದ ರೈತ ಹೆಚ್. ವಿ. ನಾರಾಯಣಸ್ವಾಮಿ , ಕೀಲುಹೊಳಲಿ ರೈತ ಕೃಷ್ಣಪ್ಪ ರವರು ಹೊಸಕೆರೆ ಗ್ರಾಮದ ಕೆರೆ ಅಚ್ಚುಕಟ್ಟಿನಲ್ಲಿ ತಲಾ ಎರಡು ಎಕರೆ ಜಮೀನನ್ನು ಬೇಸಿಗೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಭತ್ತ ಬೆಳೆಯಲು ಅವಕಾಶ ಮಾಡಿಕೊಟ್ಟ ಕಾರಣ ೧೦೦ ಕ್ವಿಂಟಾಲ್ ಭತ್ತ ಬೆಳೆದ ಇಬ್ಬರೂ ರೈತರನ್ನು ಸನ್ಮಾನಿಸಿ ಕಾರ್ಯಕ್ರಮದಲ್ಲಿ ಮಹಿಳಾ ಕೃಷಿ ಕಾರ್ಮಿಕರಿಗೆ ಅರಿಶಿಣ ಕುಂಕುಮ, ಕುಪ್ಪಸ, ಬಳೆ ಬಾಗಿನ ನೀಡಿ ಭತ್ತವನ್ನು ದಾನವನ್ನು ಮಾಡಲಾಯಿತು.

ಬಿ. ಕೆ. ಎಸ್. ಗ್ರಾಮ ಸಮಿತಿ ಅಧ್ಯಕ್ಷ ಜಿ . ಉಮೇಶ್ ಕುಮಾರ್,ತಾಲೂಕು ಅಧ್ಯಕ್ಷ ಉಗನಿ ಆರ್. ನಾರಾಯಣಗೌಡ, ರೈತರದ ಸತೀಶ್ ಕುಮಾರ್, ಹನುಮಪ್ಪ, ವೆಂಕಟೇಶಪ್ಪ, ಕೃಷ್ಣಪ್ಪ, ವೆಂಕಟೇಶ್ , ನಾರಾಯಣಪ್ಪ ನಂಜುAಡಪ್ಪ , ಮಂಜಮ್ಮ ಮತ್ತಿತರ ಮಹಿಳೆಯರು ಇದ್ದರು.

ಚಿತ್ರ : ಮುಳಬಾಗಿಲು ತಾಲೂಕಿನ ಅವನಿ ಹೋಬಳಿ ಪಿಚ್ಚಗುಂಟ್ಲಹಳ್ಳಿ ಗ್ರಾಮದ ಶ್ರೀ ಆದಿಪರಾಶಕ್ತಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಮತ್ತು ಭಾರತೀಯ ಕಿಸಾನ್ ಸಂಘ ಸಹಯೋಗದಲ್ಲಿ ಮಂಗಳವಾರ ಭತ್ತದ ರಾಶಿ ಪೂಜೆ, ಭೂಮಿ ( ಮಣ್ಣು) ನ ಪೂಜೆಯನ್ನು ಶ್ರೀ ಆದಿಪರ ಶಕ್ತಿ ದೇವಾಲಯದ ತಿಮ್ಮಪ್ಪ ಸ್ವಾಮಿ ನೇತೃತ್ವದಲ್ಲಿ ನೆರವೇರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande