ಪ್ರೀಯಾಂಕ್ ರಾಜಿನಾಮೆಗೆ ಬಿಜೆಪಿ ನಾಯಕರ ಒತ್ತಾಯ
ಕಲಬುರಗಿ, 4 ಜೂನ್ (ಹಿ.ಸ.): ಆ್ಯಂಕರ್: ಕಲಬುರಗಿಯಲ್ಲಿ ಅಕ್ರಮ ದಂಧೆಗಳು ಹೆಚ್ಚಾಗಿದ್ದು ನೈತಿಕ ಹೊಣೆಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು. ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ
ಪ್ರೀಯಾಂಕ್ ರಾಜಿನಾಮೆಗೆ ಬಿಜೆಪಿ ನಾಯಕರ ಒತ್ತಾಯ


ಕಲಬುರಗಿ, 4 ಜೂನ್ (ಹಿ.ಸ.):

ಆ್ಯಂಕರ್:

ಕಲಬುರಗಿಯಲ್ಲಿ ಅಕ್ರಮ ದಂಧೆಗಳು ಹೆಚ್ಚಾಗಿದ್ದು ನೈತಿಕ ಹೊಣೆಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು.

ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಅಂಬರಾಯ ಅಷ್ಠಗಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ್ ಬೆಣ್ಣೂರಕರ್ ಅವರು, ಜಿಲ್ಲೆಯಲ್ಲಿ ಇತ್ತೀಚಿಗೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಪ್ರೀಯಾಂಕ್ ಖರ್ಗೆ ಅವರ ಬೆಂಬಲವಿದೆ. ಹೀಗಾಗಿ ನೈತಿಕ ಹೊಣೆಹೊತ್ತು ಪ್ರೀಯಾಂಕ್ ಖರ್ಗೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇತ್ತಿಚೆಗೆ ಕೆಲ ಮುಖಂಡರು ಪ್ರೀಯಾಂಕ್ ಖರ್ಗೆ ಅವರ ಪರ ವಹಿಸಿಕೊಂಡು ಕಲಬುರಗಿಯಲ್ಲಿ ‌ಪ್ರತಿಭಟನೆ ನಡೆಸಿದರು. ಆ ಹೋರಾಟದಲ್ಲಿ ಸಾವಿರ ಜನ ಇರ್ಲಿಲ್ಲ. ಹೋರಟಕ್ಕೆ ಪ್ರೀಯಾಂಕ್ ಖರ್ಗೆ ಧನ್ಯವಾದ ತಿಳಿಸುತ್ತಾರೆ. ಆಡಳಿತ ಪಕ್ಷದಲ್ಲಿ ಇದ್ದುಕೊಂಡ ಅವರೇ ರಸ್ತೆಗಿಳಿದು ಹೋರಾಟ ಮಾಡಿಿದರೆ. ಜನಸಾಮಾನ್ಯರ ಗತಿ ಎನು ಎಂದು ಕಿಡಿಕಾರಿದರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಅವ್ವಣ್ಣಾ ಮ್ಯಾಕೇರಿ, ಗಣೇಶ ವಳಕೇರಿ ಸೇರಿದಂತೆ ಅನೇಕರು ಹಾಜರಿದ್ದರು. ‌

---------------

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande