ಬಳ್ಳಾರಿ, 4 ಜೂನ್ (ಹಿ.ಸ.)
ಆ್ಯಂಕರ್: ನಟ ಕಮಲ್ ಹಾಸನ್ ಅವರು ಕನ್ನಡದ ಕುರಿತು ಕೀಳಾಗಿ ಮಾತನಾಡಿ, ಕನ್ನಡಿಗರಲ್ಲಿ ಕ್ಷಮೆ ಕೇಳಲು ನಿರಾಕರಿಸಿರುವ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ನಟರ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ, ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಲಹಾಸನ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ನ್ಯಾಯಾಲಯದ ಸೂಚನೆಯ ಮೇಲಾದಾರು ಕನ್ನಡಿಗರ ಕ್ಷಮೆ ಕೇಳಿ, ನೈತಿಕತೆ ತೋರಿಸಬೇಕಿತ್ತು. ಆದರೆ, ನಟ ಕನ್ನಡಿಗರ ಮೇಲೆ ದ್ವೇಷ ಭಾವನೆಯನ್ನು ತೋರಿಸಿ, ಕ್ಷಮೆ ಕೇಳಲು ನಿರಾಕರಿಸಿರುವುದು ಅವರ ಬುದ್ಧಿಭ್ರಮಣೆಗೆ ಸಾಕ್ಷಿ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್