ಬಳ್ಳಾರಿ, 4 ಜೂನ್ (ಹಿ.ಸ.)
ಆ್ಯಂಕರ್:
ಗಂಭೀರವಾಗಿ ಗಾಯಗೊಂಡಿದ್ದ ಆಕಳು ಕರುಗೆ ಜೈನ್ ಸಮುದಾಯದ ಗೋ ಸೇವಾ ಸಮಿತಿಯ ಪದಾಧಿಕಾರಿಗಳು ಆಕಳು ಕರುವಿಗೆ ಸೂಕ್ತ ಚಿಕಿತ್ಸೆ ನೀಡಿ, ಸಂರಕ್ಷಿಸಿದ್ದಾರೆ.
ಗಣೇಶ್ ಕಾಲೋನಿಯ ಉದ್ಯಾನವನದ ಬಳಿ ಆಕಳು ಕರುವೊಂದು ಗಂಭೀರವಾಗಿ ಗಾಯಗೊಂಡು ನರಳಾಡುತ್ತಿತ್ತು. ಈ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಮುಖಂಡರು - ಗೋ ಸೇವಾ ಸಮಿತಿ ಸದಸ್ಯರು ಗೋಶಾಲೆಗೆ ತೆಗೆದುಕೊಂಡು ಹೋಗಿ, ಸೂಕ್ತವಾದ ಚಿಕಿತ್ಸೆಯನ್ನು ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್