ಕಲಾವಿದರಿಗೆ ಸರ್ಕಾರ ಆಸರೆಯಾಗಬೇಕು : ಮಂಜಮ್ಮ ಜೋಗತಿ
ಮರಿಯಮ್ಮನಹಳ್ಳಿ, 30 ಜೂನ್ (ಹಿ.ಸ.) : ಆ್ಯಂಕರ್ : ಕಲಾವಿದರ ನೆರವಿಗೆ ಸರ್ಕಾರ ಆಸರೆಯಾದಲ್ಲಿ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕತ ಹಿರಿಯ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಅವರು ತಿಳಿಸಿದ್ದಾರೆ. ದುರ್ಗಾದಾಸ್ ಕಲಾಮಂದಿರದಲ್ಲಿ ರಂಗಬಿಂಬದ 3ನೇ ವರ್ಷದ ವಾರ್ಷ
ಕಲಾವಿದರಿಗೆ ಸರ್ಕಾರ ಆಸರೆಯಾಗಬೇಕು : ಮಂಜಮ್ಮ ಜೋಗತಿ


ಕಲಾವಿದರಿಗೆ ಸರ್ಕಾರ ಆಸರೆಯಾಗಬೇಕು : ಮಂಜಮ್ಮ ಜೋಗತಿ


ಕಲಾವಿದರಿಗೆ ಸರ್ಕಾರ ಆಸರೆಯಾಗಬೇಕು : ಮಂಜಮ್ಮ ಜೋಗತಿ


ಕಲಾವಿದರಿಗೆ ಸರ್ಕಾರ ಆಸರೆಯಾಗಬೇಕು : ಮಂಜಮ್ಮ ಜೋಗತಿ


ಮರಿಯಮ್ಮನಹಳ್ಳಿ, 30 ಜೂನ್ (ಹಿ.ಸ.) :

ಆ್ಯಂಕರ್ : ಕಲಾವಿದರ ನೆರವಿಗೆ ಸರ್ಕಾರ ಆಸರೆಯಾದಲ್ಲಿ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕತ ಹಿರಿಯ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಅವರು ತಿಳಿಸಿದ್ದಾರೆ.

ದುರ್ಗಾದಾಸ್ ಕಲಾಮಂದಿರದಲ್ಲಿ ರಂಗಬಿಂಬದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ `ಸಂಗ್ಯಾ ಬಾಳ್ಯ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲಾವಿದರ ಬದುಕು ಹಸನಾಗಲು ಸರ್ಕಾರ ನೆರವಾಗಬೇಕು. ಬಡಕಲಾವಿದರು ಮತ್ತು ಕಲಾ ಸಂಸ್ಥೆಗಳ ನೆರವಿಗೆ ಮುಂದಾಗುವ ಮೂಲಕ ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.

ಮರಿಯಮ್ಮನಹಳ್ಳಿಯ ಬುಡ್ಡೆಕಲ್ಲಿಗೆ ಬಹುಶಃ ಕಲಾವಿದರೇ, ಮೊದಲೇ ಬುನಾದಿ ಹಾಕಿದ್ದ ಹಾಗಿದೆ. ಮರಿಯಮ್ಮನ ಹಳ್ಳಿಯಲ್ಲಿ ಬೆಳಗಾಗೋವರೆಗೆ ನಾಟಕ, ಬಯಲಾಟ ಪ್ರದರ್ಶನಗೊಳ್ಳುತ್ತಿದ್ದ ಇತಿಹಾಸವಿದೆ. ರಂಗಬಿಂಬ ಕಲಾತಂಡವು ನಾಟಕ ಸೇರಿದಂತೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಈಗ ರಂಗಬಿಂಬ ಕಲಾ ಟ್ರಸ್ಟ್‍ಗೆ ಮೂರು ವರ್ಷಗಳಾಗಿವೆ. ಮೂರು ವರ್ಷಗಳಲ್ಲಿ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲೆಯ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಚಿದ್ರಿ ಸತೀಶ್ ಅವರು, ಮರಿಯಮ್ಮನಹಳ್ಳಿ ಕಲಾವಿದರ ತವರೂರು ಎಂಬುದನ್ನು ರಂಗಬಿಂಬದಿಂದ ಸಂಗ್ಯಾಬ್ಯಾಳ ನಾಟಕ ಪ್ರದರ್ಶನದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ. ಮರಿಯಮ್ಮನಹಳ್ಳಿಯಲ್ಲಿ ಕಲಾವಿದರು ಬೆಳೆಯಲು ಎಲ್ಲರೂ ಸಹಕಾರ ನೀಡಬೇಕು. ನಾಟಕಗಳನ್ನು ಹೆಚ್ಚಾಗಿ ನೋಡುವ ಮೂಲಕ ಕಲಾವಿದರ ಕಲೆಯನ್ನು ಗೌರವಿಸಬೇಕು ಎಂದರು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತೆ ಡಾ. ನಾಗರತ್ನಮ್ಮ, ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಪಂಚಗ್ಯಾರಂಟಿ ಯೋಜನೆ ಅನುμÁ್ಠನ ಸಮಿತಿ ಅಧ್ಯಕ್ಷ ಕೆ. ಶಿವಮೂರ್ತಿ, ಪ.ಪಂ ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ಲಲಿತ ಕಲಾರಂಗದ ಉಪಾಧ್ಯಕ್ಷ ಜಿ.ಎಂ. ಕೊಟ್ರೇಶ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪ.ಪಂ. ಸದಸ್ಯ ಕೆ. ಮಂಜುನಾಥ, ಜಿ.ಪಂ. ಮಾಜಿ ಸದಸ್ಯ ಗೋವಿಂದರ ಪರುಶುರಾಮ, ಸ್ಥಳೀಯ ಮುಖಂಡರಾದ ಗರಗ ಪ್ರಕಾಶ, ಎಂ. ಕೀರ್ತಿರಾಜ್ ಜೈನ್, ರೋಗಾಣಿ ಮಂಜುನಾಥ, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ್ ಸೇರಿದಂತೆ ಇತರರು ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದರು.

ರಂಗಬಿಂಬ ಟ್ರಸ್ಟ್‍ನ ಅಧ್ಯಕ್ಷೆ ಎಂ. ಗಾಯತ್ರಿದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾವದ ಕೆ. ನಾಗೇಶ್ ಸ್ವಾಗತಿಸಿದರು. ರಂಗಬಿಂಬ ಕಾರ್ಯದರ್ಶಿ ಸಿ.ಕೆ. ನಾಗರಾಜ ಪ್ರಾಸ್ತಾವಿಕ ಭಾಷಣ ಮಾಡಿದರು. ಕಲಾವಿದೆ ಪುಷ್ಪ ಪಿ. ಸರದಾರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

‘ನಾಡೋಜ’ ಡಾ. ಚಂದ್ರಶೇಖರ ಕಂಬಾರ ಅವರು ರಚಿಸಿದ, ಬಿ.ಎಂ.ಎಸ್. ಪ್ರಭು ಅವರ ನಿರ್ದೇಶನದ ಸಂಗ್ಯಾ ಬಾಳ್ಯ ನಾಟಕವನ್ನು ಈ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಯಿತು.

ಸಂಗ್ಯಾ - ಸರದಾರ ಬಿ, ಬಾಳ್ಯ- ಮಹಾಂತೇಶ್ ಮಸಾರಿ ನೆಲ್ಲುಕುದುರೆ, ಈರ್ಯ- ಜಿ. ಸೋಮಶೇಖರ್, ವಿರುಪಾಕ್ಷಿ- ನವೀನ್ ಕುಮಾರ್ ಟಿ, ಬಸವಂತ - ಕೊಟ್ರೇಶ್ ಲಕ್ಕಿಮರ, ಮಾರ್ವಾಡಿ- ಹೆಚ್. ಮಂಜುನಾಥ, ಪೊಸ್ಟ್ ಮ್ಯಾನ್- ಅಕ್ಷರ ಎನ್. ದೇವನಕೊಂಡ, ವ್ಯಕ್ತಿ- ಹುರುಕೊಳ್ಳಿ ಗುರುಪ್ರಕಾಶ್, ಗಂಗಿ- ಲಕ್ಕಿಮರ ಶಾರದ, ಪಾರವ್ವ- ಕೆ. ಸರ್ವಮಂಗಳ ನಾಟಕದಲ್ಲಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷರ ಗಮನಸೆಳೆದರು.

ಸಂಗೀತದಲ್ಲಿ ಹಾರ್ಮೋನಿಯಂ- ಕೆ. ತಿಪ್ಪಣ್ಣ, ತಬಲ- ಜಿ.ಕೆ. ಮೌನೇಶ್, ಗಾಯನ- ಕೆ. ಮಲ್ಲನಗೌಡ, ಜಿ. ಮಲ್ಲಪ್ಪ, ಶರಣಬಸವ, ಬಿ. ಶಾರದಮ್ಮ, ಜಿ, ಸಂಗೀತ, ಜಿ. ನಾಗವೇಣಿರವರ ಹಿನ್ನೆಲೆಗಾಯನ ಗಮನ ಸೆಳೆಯಿತು.

ನಾಟಕಕ್ಕೆ ಬೆಳಕು- ಬಿ.ಎಂ.ಎಸ್. ಮೃತ್ಯುಂಜಯ, ಕಟ್ಟೆ ಉಮೇಶ್, ಧ್ವನಿ- ಹ್ಯಾಟಿ ಮಂಜುನಾಥ, ರಂಗಸಜ್ಜಿಕೆ- ಕೆ. ನಾಗೇಶ್, ರಂಗಪರಿಕರ- ಜಿ. ಸೋಮಣ್ಣ, ಪ್ರಸಾದನ ಪುಷ್ಪ ಪಿ. ಸರದಾರ, ವಸ್ತ್ರಲಂಕಾರ- ಪ್ರಕೃತಿ ಎನ್. ದೇನವಕೊಂಡ, ಸಿ.ಕೆ. ನಾಗರಾಜ ನಿರ್ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande